<p><strong>ಧಾರವಾಡ</strong>: ಲಂಚ ಪ್ರಕರಣದಲ್ಲಿ ಕುಂದಗೋಳದ ಭೂಮಾಪನ ಇಲಾಖೆ ಸರ್ವೆಯರ್ ರಾಘವೇಂದ್ರಗೆ ನಾಲ್ಕು ವರ್ಷ ಜೈಲು, ₹ 20 ಸಾವಿರ ದಂಡವನ್ನು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ವಿಶೇಷ ಕೋರ್ಟ್ ಶನಿವಾರ ವಿಧಿಸಿದೆ. </p><p>ನ್ಯಾಯಾಧೀಶರಾದ ಜರೀನಾ ಅವರು ಆದೇಶ ನೀಡಿದ್ದಾರೆ. </p><p>ಏನಿದು ಪ್ರಕರಣ?: ಕುಂದಗೋಳ ತಾಲ್ಲೂಕು ಶಿರೂರಿನ ಮಲ್ಲಿಕಾರ್ಜುನಗೌಡ ಅವರು ಜಮೀನು ಅಳತೆ, ಪೋಡಿಗಾಗಿ ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ಸರ್ವೆಯರ್ ರಾಘವೇಂದ್ರ ಅವರು ₹ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2019 ಜೂನ್ 3ರಂದು ಕುಂದಗೋಳದ ಕೆಎಸ್ಆರ್ಟಿಸಿ ಕ್ಯಾಂಟೀನ್ಲ್ಲಿ ರಾಘವೇಂದ್ರ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. </p><p>ಪೊಲೀಸ್ ಇನ್ಸ್ಪೆಕ್ಟರ್ ಬಿ.ಎ.ಜಾಧವ ಅವರು ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಎಸ್.ಶಿವಳ್ಳಿ ಅವರು ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಲಂಚ ಪ್ರಕರಣದಲ್ಲಿ ಕುಂದಗೋಳದ ಭೂಮಾಪನ ಇಲಾಖೆ ಸರ್ವೆಯರ್ ರಾಘವೇಂದ್ರಗೆ ನಾಲ್ಕು ವರ್ಷ ಜೈಲು, ₹ 20 ಸಾವಿರ ದಂಡವನ್ನು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ವಿಶೇಷ ಕೋರ್ಟ್ ಶನಿವಾರ ವಿಧಿಸಿದೆ. </p><p>ನ್ಯಾಯಾಧೀಶರಾದ ಜರೀನಾ ಅವರು ಆದೇಶ ನೀಡಿದ್ದಾರೆ. </p><p>ಏನಿದು ಪ್ರಕರಣ?: ಕುಂದಗೋಳ ತಾಲ್ಲೂಕು ಶಿರೂರಿನ ಮಲ್ಲಿಕಾರ್ಜುನಗೌಡ ಅವರು ಜಮೀನು ಅಳತೆ, ಪೋಡಿಗಾಗಿ ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ಸರ್ವೆಯರ್ ರಾಘವೇಂದ್ರ ಅವರು ₹ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2019 ಜೂನ್ 3ರಂದು ಕುಂದಗೋಳದ ಕೆಎಸ್ಆರ್ಟಿಸಿ ಕ್ಯಾಂಟೀನ್ಲ್ಲಿ ರಾಘವೇಂದ್ರ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. </p><p>ಪೊಲೀಸ್ ಇನ್ಸ್ಪೆಕ್ಟರ್ ಬಿ.ಎ.ಜಾಧವ ಅವರು ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಎಸ್.ಶಿವಳ್ಳಿ ಅವರು ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>