‘ಪಾಲಿಕೆಯವರು ಸಾರ್ವಜನಿಕರಿಂದ ಕೇವಲ ತೆರಿಗೆ, ಶುಲ್ಕ ವಸೂಲಿಗೆ ಸೀಮಿತಗೊಳ್ಳದೆ, ಅವರ ಜೀವನಕ್ಕೆ ಸ್ಪಂದಿಸು ಕಾರ್ಯ ಮಾಡಬೇಕು. ಗಣಪತಿ ವಿರ್ಜಜನೆ ಸಂದರ್ಭದಲ್ಲಿ ಹಾಗೂ ಕಲಘಟಗಿಯಲ್ಲಿ ಸಿಡಿಲು ಬಡಿದು ಮೃತಪಟ್ಟ ವೇಳೆ ಪಾಲಿಕೆ ಪರಿಹಾರಧನವನ್ನು ನೀಡಿತ್ತು. ಅದೇ ಮಾದರಿಯಲ್ಲಿ ಕಟ್ಟಡ ದುರಂತದಲ್ಲಿ ಮೃತಪಟ್ಟವರಿಗೆ ಹಾಗೂ ಗಾಯಗೊಂಡವರಿಗೆ ಪರಿಹಾರಧನ ವಿತರಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ’ ಎಂದರು.