<p><strong>ಹುಬ್ಬಳ್ಳಿ: </strong>‘ಹತ್ತು ವರ್ಷದ ಮಗನಿಂದ ದೂರವಿದ್ದು ಎರಡು ತಿಂಗಳಾಯಿತು. ಅಮ್ಮನನ್ನು ನೋಡಬೇಕಿದೆ ಎಂದು ಎದೆಯೊಡೆದಿದ್ದಾನೆ. ನಿತ್ಯ ಅಳುತ್ತಿದ್ದಾನೆ. ನನ್ನ ಮಗನನ್ನು ನೋಡಬೇಕಿದೆ. ಊರಿಗೆ ಕಳುಹಿಸಿಕೊಡಿ...’</p>.<p>ಹೀಗೆ ಅಳುತ್ತಲೇ ಮನವಿ ಮಾಡಿಕೊಂಡಿದ್ದು ಯಾದಗಿರಿ ಸಮೀಪದ ಆನೂರು ಬಿ ಗ್ರಾಮದ ಮಹಿಳೆ ಸಾವಿತ್ರಿ ಅಂಬಿಗೇರ. ನಗರದ ಹೊಸ ಬಸ್ ನಿಲ್ದಾಣದಲ್ಲಿ ಯಾದಗಿರಿ ಬಸ್ಗಾಗಿ ಕಾಯುತ್ತಿದ್ದ ಅವರು ಬೆಳಿಗ್ಗೆ 6 ಗಂಟೆಗೆ ನಿಲ್ದಾಣಕ್ಕೆ ಬಂದಿದ್ದರು.</p>.<p>30 ಪ್ರಯಾಣಿಕರು ಭರ್ತಿಯಾಗುವ ತನಕ ಬಸ್ ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ಕಾಯುತ್ತಿದ್ದೇನೆ. ಬಸ್ ನಿಲ್ದಾಣದಲ್ಲಿ ನೀರು ಕೂಡ ಸಿಗುತ್ತಿಲ್ಲ ಎಂದು ಸಾವಿತ್ರಿ ಬೇಸರ ವ್ಯಕ್ತಪಡಿಸಿದರು.</p>.<p>30 ಜನ ಆದರಷ್ಟೇ ಬಸ್ ಬಿಡುತ್ತಾರಂತೆ. ಇಲ್ಲವಾದರೆ ವಾಪಸ್ ಮನೆಗೆ ಹೋಗಬೇಕು. ಹೀಗಾದರೆ ನಾವು ಊರು ಸೇರುವುದು ಯಾವಾಗ? ಮಗನನ್ನು ನೋಡುವುದು ಯಾವಾಗ? ಎಂದು ಪ್ರಶ್ನಿಸಿದರು.</p>.<p>ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಿಂದ ಬೆಂಗಳೂರು, ಶಿವಮೊಗ್ಗ, ಹಾವೇರಿ ಕಡೆಗೆ ಮಂಗಳವಾರ ಮುಂಜಾನೆಬಸ್ಗಳು ಹೊರಟವು. ಪ್ರಯಾಣಿಕರು ಅಂತರ ಕಾಯ್ದುಕೊಳ್ಳದೆ ಬಸ್ ಯಾವಾಗ ಬರುತ್ತದೆ ಎಂದು ವಿಚಾರಿಸಲು ಮುಗಿಬಿದ್ದರು. ಅಂತರ ಕಾಯ್ದುಕೊಳ್ಳಲು ಚೌಕಗಳನ್ನು ಹಾಕಿದ್ದರೂ, ಚೌಕದಲ್ಲಿ ಯಾರೂ ನಿಂತಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>‘ಹತ್ತು ವರ್ಷದ ಮಗನಿಂದ ದೂರವಿದ್ದು ಎರಡು ತಿಂಗಳಾಯಿತು. ಅಮ್ಮನನ್ನು ನೋಡಬೇಕಿದೆ ಎಂದು ಎದೆಯೊಡೆದಿದ್ದಾನೆ. ನಿತ್ಯ ಅಳುತ್ತಿದ್ದಾನೆ. ನನ್ನ ಮಗನನ್ನು ನೋಡಬೇಕಿದೆ. ಊರಿಗೆ ಕಳುಹಿಸಿಕೊಡಿ...’</p>.<p>ಹೀಗೆ ಅಳುತ್ತಲೇ ಮನವಿ ಮಾಡಿಕೊಂಡಿದ್ದು ಯಾದಗಿರಿ ಸಮೀಪದ ಆನೂರು ಬಿ ಗ್ರಾಮದ ಮಹಿಳೆ ಸಾವಿತ್ರಿ ಅಂಬಿಗೇರ. ನಗರದ ಹೊಸ ಬಸ್ ನಿಲ್ದಾಣದಲ್ಲಿ ಯಾದಗಿರಿ ಬಸ್ಗಾಗಿ ಕಾಯುತ್ತಿದ್ದ ಅವರು ಬೆಳಿಗ್ಗೆ 6 ಗಂಟೆಗೆ ನಿಲ್ದಾಣಕ್ಕೆ ಬಂದಿದ್ದರು.</p>.<p>30 ಪ್ರಯಾಣಿಕರು ಭರ್ತಿಯಾಗುವ ತನಕ ಬಸ್ ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ಕಾಯುತ್ತಿದ್ದೇನೆ. ಬಸ್ ನಿಲ್ದಾಣದಲ್ಲಿ ನೀರು ಕೂಡ ಸಿಗುತ್ತಿಲ್ಲ ಎಂದು ಸಾವಿತ್ರಿ ಬೇಸರ ವ್ಯಕ್ತಪಡಿಸಿದರು.</p>.<p>30 ಜನ ಆದರಷ್ಟೇ ಬಸ್ ಬಿಡುತ್ತಾರಂತೆ. ಇಲ್ಲವಾದರೆ ವಾಪಸ್ ಮನೆಗೆ ಹೋಗಬೇಕು. ಹೀಗಾದರೆ ನಾವು ಊರು ಸೇರುವುದು ಯಾವಾಗ? ಮಗನನ್ನು ನೋಡುವುದು ಯಾವಾಗ? ಎಂದು ಪ್ರಶ್ನಿಸಿದರು.</p>.<p>ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಿಂದ ಬೆಂಗಳೂರು, ಶಿವಮೊಗ್ಗ, ಹಾವೇರಿ ಕಡೆಗೆ ಮಂಗಳವಾರ ಮುಂಜಾನೆಬಸ್ಗಳು ಹೊರಟವು. ಪ್ರಯಾಣಿಕರು ಅಂತರ ಕಾಯ್ದುಕೊಳ್ಳದೆ ಬಸ್ ಯಾವಾಗ ಬರುತ್ತದೆ ಎಂದು ವಿಚಾರಿಸಲು ಮುಗಿಬಿದ್ದರು. ಅಂತರ ಕಾಯ್ದುಕೊಳ್ಳಲು ಚೌಕಗಳನ್ನು ಹಾಕಿದ್ದರೂ, ಚೌಕದಲ್ಲಿ ಯಾರೂ ನಿಂತಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>