ಹುಬ್ಬಳ್ಳಿ: ಕಾರ್ಯಕರ್ತರು ಪ್ರತಿ ವಾರ್ಡ್ನಲ್ಲಿ ರೈತ ಉತ್ಪಾದನಾ ಸಂಸ್ಥೆಗಳನ್ನು ಸ್ಥಾಪಿಸಬೇಕು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜಾರಿಗೊಳಿಸಿದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಪಕ್ಷದ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಪಾಲಕ್ಷಿಗೌಡ್ರ ಪಾಟೀಲ ಹೇಳಿದರು.
ದೇಶಪಾಂಡೆ ನಗರದ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಮಹಾನಗರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ‘ಪಕ್ಷ ಸಂಘಟನೆಗಾಗಿ ತಿಂಗಳಲ್ಲಿ ಕನಿಷ್ಠ 10 ದಿನಗಳನ್ನಾದರೂ ಮೀಸಲಿಡಬೇಕು’ ಎಂದರು.
ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಬಸವ, ಪಕ್ಷದ ಸಂಘಟನೆ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು.
ಗಬ್ಬೂರಿನಲ್ಲಿ ಶಾಲೆ ನಿರ್ಮಾಣಕ್ಕೆ ಒಂದು ಎಕರೆ ಜಾಗ ದಾನವಾಗಿ ನೀಡಿದ ಶಿವಾನಂದ ಹೊಸೂರು ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಕಪಟಕರ, ಚನ್ನಬಸಪ್ಪ ಯಲಬುರ್ಗಿ, ರಾಜು ಕೋರ್ಯಾಣಮಠ, ವೀರೇಶ ಹಿರೇಮಠ, ಕುಮಾರಗೌಡ ಪಾಟೀಲ, ಲೋಕೇಶ್ ಗುಂಜಾಳ, ನಿರಂಜನ, ವಿರೇಶ ಎಲಿಬಳ್ಳಿ, ದತ್ತಮೂರ್ತಿ ಕುಲಕರ್ಣಿ ಇದ್ದರು.