ಹುಬ್ಬಳ್ಳಿ: ಇಲ್ಲಿನ ಘಂಟಿಕೇರಿಯ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿನ ಕೋವಿಡ್ ಕೇರ್ ಸೆಂಟರ್ನಲ್ಲಿ ದಾಖಲಾಗಿರುವ ಲಕ್ಷಣರಹಿತ ಕೊರೊನಾ ಸೋಂಕಿತರು ಶುಕ್ರವಾರ ಕರೋಕೆ ರಾಗಕ್ಕೆ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.
ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗುವ ಚಟುವಟಿಕೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ನೀಡಿದ್ದ ಸೂಚನೆ ಮೇರೆಗೆ ಕರೋಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಗೊಂಬೆ ಹೇಳುತೈತಿ, ಗೊಂಬೆ ಹೇಳುತೈತಿ ನೀನೇ ರಾಜಕುಮಾರ’ ಹಾಡನ್ನು ಹಾಡಲಾಯಿತು.
‘ಏನಾದರಾಗಲಿ ಮುಂದೆ ಸಾಗು ನೀ’ ಹಾಡಿಗೆ ಬಹುತೇಕರು ದನಿಯಾದರು. ಕೆಲಕಾಲ ಮಾನಸಿಕ ಒತ್ತಡ ಮರೆತು ಸಂಭ್ರಮಿಸಿದರು.