ಕೇಶ್ವಾರಪುದ ಸಂತ ಜೋಸೆಫ್ ಕ್ಯಾಥೊಲಿಕ್ ಚರ್ಚ್, ಶಾಂತಿನಗರದ ಇನ್ಫಂಟ್ ಜೀಸಸ್ ಚರ್ಚ್, ಚನ್ನಮ್ಮ ವೃತ್ತದ ಬಳಿಯ ಮೈಯರ್ ಸ್ಮರಣಾರ್ಥ ಚರ್ಚ್, ಗಾಂಧಿನಗರದ ಕೆಥೆಡ್ರೆಲ್ ಚರ್ಚ್ನಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಹೆಚ್ಚಿನ ಕ್ರೈಸ್ತರು ಪಾಲ್ಗೊಂಡಿದ್ದರು. ಬೈರಿದೇವರಕೊಪ್ಪದ ಶೈಲ್ ಶ್ರೀ ಮಂಜುನಾಥ ಸಂಸ್ಥೆಯ ಕಿಡ್ಸ್ ವರ್ಲ್ಡ್ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಸಾಂತಾಕ್ಲಾಸ್ ವೇಷತೊಟ್ಟು ಸಂಭ್ರಮಿಸಿದರು. ಹಬ್ಬದ ಪ್ರಯುಕ್ತ ವಿವಿಧ ಮಾಂಸಾಹಾರದ ಖಾದ್ಯಗಳನ್ನು ತಯಾರಿಸಿ, ಕುಟುಂಬ ಸಮೇತ ಸವಿದರು.