<p><strong>ಧಾರವಾಡ:</strong> ‘ಹಫ್ತಾ ನೀಡುವಂತೆ ಎಳನೀರು ವ್ಯಾಪಾರಿಗಳಿಗೆ ಧಮ್ಕಿ ಹಾಕಿದ್ದರೆ, ಆ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಾರೆ’ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.</p>.<p>ಈಚೆಗೆ ಬಿಡುಗಡೆಯಾದ ರೌಡಿ ಶೀಟರ್ವೊಬ್ಬ ‘ಹಫ್ತಾ’ ನೀಡುವಂತೆ ಎಳನೀರು ವ್ಯಾಪಾರಿಗಳಿಗೆ ಪೀಡಿಸುತ್ತಿದ್ದಾನೆಂದು ಮಾಧಮ್ಯದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಧಮ್ಕಿ ಹಾಕಿದವರ ವಿರುದ್ಧ ‘ಕೊಕಾ’ (ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಜಾರಿ ಮಾಡುತ್ತಾರೆ’ ಎಂದರು.</p>.<p>‘ಅರಣ್ಯ ಇಲಾಖೆ ಜಾಗದಲ್ಲಿ ಇಸ್ಪಿಟ್ ಆಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ನೌಕರರು ಇದ್ದರೆ ಪ್ರಕರಣದಲ್ಲಿ ಅವರ ಹೆಸರುಗಳನ್ನು ದಾಖಲಿಸುವಂತೆ ಪೊಲೀಸರಿಗೆ ತಿಳಿಸುತ್ತೇನೆ’ ಎಂದು ಉತ್ತರಿಸಿದರು.</p>.<p>‘ಎಂಎಸ್ಪಿ ನೋಂದಣಿ ಕೇಂದ್ರದಲ್ಲಿ ಹೆಸರು ಕಾಳು ಗುಣಮಟ್ಟ ಇಲ್ಲ ಎಂದು ಉಪ್ಪಿನಬೆಟಗೇರಿ ಮತ್ತು ಧಾರವಾಡದಲ್ಲಿ ನೋಂದಣಿ ಮಾಡುತ್ತಿಲ್ಲ ಎಂಬ ಕುರಿತು ವಿಚಾರಣೆ ಮಾಡುತ್ತೇನೆ’ ಎಂದರು.</p>.<p>‘ಹೈಕಮಾಂಡ್ ಸೂಚನೆ ನೀಡಿದರೆ ಸಂಪುಟ ಪುನರ್ರಚನೆ ಮಾಡುತ್ತಾರೆ. ಕೋನರೆಡ್ಡಿ ಮಾತ್ರವಲ್ಲ ಎಲ್ಲರೂ ಆಕಾಂಕ್ಷಿಗಳು ಇದ್ದಾರೆ. ಈ ಬಗ್ಗೆ ಏನೂ ಬಹಿರಂಗವಾಗಿ ಮಾತನಾಡಬಾರದು ಎಂದು ಪಕ್ಷ ಸೂಚನೆ ನೀಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ಹಫ್ತಾ ನೀಡುವಂತೆ ಎಳನೀರು ವ್ಯಾಪಾರಿಗಳಿಗೆ ಧಮ್ಕಿ ಹಾಕಿದ್ದರೆ, ಆ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಾರೆ’ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.</p>.<p>ಈಚೆಗೆ ಬಿಡುಗಡೆಯಾದ ರೌಡಿ ಶೀಟರ್ವೊಬ್ಬ ‘ಹಫ್ತಾ’ ನೀಡುವಂತೆ ಎಳನೀರು ವ್ಯಾಪಾರಿಗಳಿಗೆ ಪೀಡಿಸುತ್ತಿದ್ದಾನೆಂದು ಮಾಧಮ್ಯದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಧಮ್ಕಿ ಹಾಕಿದವರ ವಿರುದ್ಧ ‘ಕೊಕಾ’ (ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಜಾರಿ ಮಾಡುತ್ತಾರೆ’ ಎಂದರು.</p>.<p>‘ಅರಣ್ಯ ಇಲಾಖೆ ಜಾಗದಲ್ಲಿ ಇಸ್ಪಿಟ್ ಆಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ನೌಕರರು ಇದ್ದರೆ ಪ್ರಕರಣದಲ್ಲಿ ಅವರ ಹೆಸರುಗಳನ್ನು ದಾಖಲಿಸುವಂತೆ ಪೊಲೀಸರಿಗೆ ತಿಳಿಸುತ್ತೇನೆ’ ಎಂದು ಉತ್ತರಿಸಿದರು.</p>.<p>‘ಎಂಎಸ್ಪಿ ನೋಂದಣಿ ಕೇಂದ್ರದಲ್ಲಿ ಹೆಸರು ಕಾಳು ಗುಣಮಟ್ಟ ಇಲ್ಲ ಎಂದು ಉಪ್ಪಿನಬೆಟಗೇರಿ ಮತ್ತು ಧಾರವಾಡದಲ್ಲಿ ನೋಂದಣಿ ಮಾಡುತ್ತಿಲ್ಲ ಎಂಬ ಕುರಿತು ವಿಚಾರಣೆ ಮಾಡುತ್ತೇನೆ’ ಎಂದರು.</p>.<p>‘ಹೈಕಮಾಂಡ್ ಸೂಚನೆ ನೀಡಿದರೆ ಸಂಪುಟ ಪುನರ್ರಚನೆ ಮಾಡುತ್ತಾರೆ. ಕೋನರೆಡ್ಡಿ ಮಾತ್ರವಲ್ಲ ಎಲ್ಲರೂ ಆಕಾಂಕ್ಷಿಗಳು ಇದ್ದಾರೆ. ಈ ಬಗ್ಗೆ ಏನೂ ಬಹಿರಂಗವಾಗಿ ಮಾತನಾಡಬಾರದು ಎಂದು ಪಕ್ಷ ಸೂಚನೆ ನೀಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>