‘ಶನಿವಾರ ಉಳ್ಳಾಗಡ್ಡಿ ದರ ಕ್ವಿಂಟಲ್ಗೆ ₹5,500 ರಿಂದ ₹6,000 ಇದ್ದಿದ್ದು, ಸೋಮವಾರ ದಿಢೀರ್ ₹2,300ಕ್ಕೆ ಕುಸಿದಿದೆ. ಎಪಿಎಂಸಿ ವರ್ತಕರು ತಮ್ಮ ಲಾಭಕ್ಕೋಸ್ಕರ ರೈತರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ' ಎಂದು ಆರೋಪಿಸಿ ಹುಬ್ಬಳ್ಳಿ–ಧಾರವಾಡ ಮಧ್ಯ ಸಂಚರಿಸುವ ಬಿಆರ್ಟಿಎಸ್ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.