‘ಲಾಬೂರಾಮ್ ಅವರಿಗೆ ಜ್ವರ ಹಾಗೂ ಗಂಟಲಿನಲ್ಲಿ ಸೋಂಕು ಆಗಿ ಬಾವು ಕಾಣಿಸಿಕೊಂಡಿತ್ತು. ಇದಕ್ಕಾಗಿ, ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಕುಟುಂಬದವರು ಬೆಂಗಳೂರಿನಲ್ಲಿ ತಮಗೆ ಗೊತ್ತಿರುವ ವೈದ್ಯರ ಬಳಿಯೇ ಮುಂದಿನ ಚಿಕಿತ್ಸೆ ಪಡೆಯುವುದಾಗಿ ಹೇಳಿ, ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರು’ ಎಂದು ಧಾರವಾಡದ ಎಸ್ಡಿಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಹೆಗಡೆ ಹೇಳಿದರು.