ಅಂಬಡಗಟ್ಟಿ ಸೋದರರಾದ ಶ್ರೀಕಾಂತ, ಶಶಿಧರ, ಶಿವಾನಂದ ಹಾಗೂ ವಿನಯ ಕುಲಕರ್ಣಿ (ಪಕ್ಷೇತರ ಅಭ್ಯರ್ಥಿಯಾಗಿ) ಕೂಡ ರೈತರ ಹೆಸರಿನಲ್ಲಿ ಆಯ್ಕೆಯಾಗಿದ್ದರು. ಅಷ್ಟರ ಮಟ್ಟಿಗೆ ರೈತ ಚಳವಳಿ ಈ ಕ್ಷೇತ್ರದ ಮೇಲೆ ಪ್ರಭಾವ ಬೀರಿತ್ತು. ವಿನಯ ಕುಲಕರ್ಣಿ ಕಾಂಗ್ರೆಸ್ ಸೇರಿದ ನಂತರ ಮೂರು ಬಾರಿ ಸ್ಪರ್ಧಿಸಿ ಎರಡು ಬಾರಿ ಪರಾಭವಗೊಂಡರು.