ಪ್ರಸಕ್ತ ಸಾಲಿನ ಮುಂಗಾರು ಮಳೆ ಸಮಯಕ್ಕೆ ಸರಿಯಾದ ಸಮಯಕ್ಕೆ ಆಗಿದ್ದರಿಂದ ತಾಲ್ಲೂಕಿನ ಬಹುತೇಕ ರೈತರು ಮುಂಗಾರು ಬಿತ್ತನೆಯ ಶೇಂಗಾ, ಹೆಸರು, ಸೋಯಾಬಿನ್, ಬಳ್ಳೊಳ್ಳಿ, ಉದ್ದು, ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತಿದ ಬೀಜಗಳು ಮೊಳಕೆಯೊಡೆದು ನಿಂತಿವೆ. ಸೋಮವಾರ ಆರಂಭವಾಗಿರುವ ಮೃಗಶಿರಾ ಮಳೆ ಬಿಟ್ಟುಬಿಡದೇ ಸುರಿಯುತ್ತಿರುವುವದರಿಂದ ಬೆಳೆಗೆನೀರುಆವರಿಸಿಕೊಂಡು ಕೊಳೆಯುವಂತಾಗಿದೆ. ರೈತರು ಬೇಸಿಗೆಯಲ್ಲಿಸಾವಿರಾರು ರೂಪಾಯಿ ಖರ್ಚು ಮಾಡಿಹಾಕಿಕೊಂಡಿದ್ದ ಬದವು, ಒಡ್ಡುಗಳು ಒಡೆಯಲು ಆರಂಭಿಸಿರುವುದು ಆತಂಕ ಹೆಚ್ಚಿಸಿದೆ.