ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳ: ನಿರಂತರ ಮಳೆ; ರೈತರಲ್ಲಿ ಆತಂಕ

ಹೊಲಗಳಲ್ಲಿ ನಿಲ್ಲುತ್ತಿರುವ ನೀರು, ಮೊಳಕೆಯೊಡೆಯುತ್ತಿರುವ ಬೀಜಗಳು
Last Updated 19 ಜೂನ್ 2021, 15:43 IST
ಅಕ್ಷರ ಗಾತ್ರ

ಕುಂದಗೋಳ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿ ನೀರು ನಿಂತಿದ್ದು, ಬಿತ್ತನೆ ಮಾಡಿದ ಬೀಜಗಳುಕೊಳೆಯುವ ಪರಿಸ್ಥಿತಿನಿರ್ಮಾಣವಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಮಳೆ ಸಮಯಕ್ಕೆ ಸರಿಯಾದ ಸಮಯಕ್ಕೆ ಆಗಿದ್ದರಿಂದ ತಾಲ್ಲೂಕಿನ ಬಹುತೇಕ ರೈತರು ಮುಂಗಾರು ಬಿತ್ತನೆಯ ಶೇಂಗಾ, ಹೆಸರು, ಸೋಯಾಬಿನ್, ಬಳ್ಳೊಳ್ಳಿ, ಉದ್ದು, ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತಿದ ಬೀಜಗಳು ಮೊಳಕೆಯೊಡೆದು ನಿಂತಿವೆ. ಸೋಮವಾರ ಆರಂಭವಾಗಿರುವ ಮೃಗಶಿರಾ ಮಳೆ ಬಿಟ್ಟುಬಿಡದೇ ಸುರಿಯುತ್ತಿರುವುವದರಿಂದ ಬೆಳೆಗೆನೀರುಆವರಿಸಿಕೊಂಡು ಕೊಳೆಯುವಂತಾಗಿದೆ. ರೈತರು ಬೇಸಿಗೆಯಲ್ಲಿಸಾವಿರಾರು ರೂಪಾಯಿ ಖರ್ಚು ಮಾಡಿಹಾಕಿಕೊಂಡಿದ್ದ ಬದವು, ಒಡ್ಡುಗಳು ಒಡೆಯಲು ಆರಂಭಿಸಿರುವುದು ಆತಂಕ ಹೆಚ್ಚಿಸಿದೆ.

ಮಳೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವುದರಿಂದ ಇಳಿಜಾರು ಪ್ರದೇಶದಲ್ಲಿರುವ ಹೊಲದ ನೀರು ಹರಿದು ಹೋದರೆ ಸಮತಟ್ಟಾದ ಹೊಲಗಳಲ್ಲಿ ತೇವಾಂಶ ಹೆಚ್ಚಾಗುತ್ತಿದೆ. ಬಿತ್ತನೆ ಬೀಜಗಳ ಮೇಲೆ ಇದರ ಪರಿಣಾಮವಾಗುತ್ತಿದೆ.ಮಳೆ ಈಗಿನಂತೆಯೇಮುಂದುವರೆದರೆ ಬಿತ್ತನೆ ಬೀಜಗಳುಭೂಮಿಯಲ್ಲೇ ಕೊಳೆಯುವು‌ದರಲ್ಲಿ ಸಂದೇಹವೇ ಇಲ್ಲಎನ್ನುತ್ತಾರೆ ಪಟ್ಟಣದ ರೈತ ಮುದಕಪ್ಪ ಕುನ್ನೂರ.

ತಾಲ್ಲೂಕಿನಲ್ಲಿ ಮೇ ನಲ್ಲಿ ವಾಡಿಕೆ ಪ್ರಕಾರ 11.8 ಸೆಂ.ಮೀ. ಆಗಬೇಕಿತ್ತು. 18.4 ಸೆಂ.ಮೀ.ನಷ್ಟು ಮಳೆಯಾಗಿದೆ. ಜೂನ್‌ನಲ್ಲಿ 5.83ಸೆಂ.ಮೀ.ನಷ್ಟು ಆಗಬೇಕಿತ್ತು. ಮಳೆಯ ಪ್ರಮಾಣ 8.81 ಸೆಂ.ಮೀ. ರಷ್ಟು ಆಗಿದೆ. ಈಗಿರುವಷ್ಟು ಮಳೆ ಸರಿಯಾಗಿದೆ. ಮಳೆ ಮುಂದುವರಿದರೆಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಖಾನೂರ.

’ಈ ವರ್ಷ ಮುಂಗಾರು ಬಿತ್ತನೆಗೆ ಸರಿಯಾದ ಸಮಯದಲ್ಲಿ ಮಳೆಯಾಗಿದ್ದಕ್ಕೆ ಖುಷಿಯಾಗಿತ್ತು. ಈಗ ಮಳೆ ಹೆಚ್ಚಾಗುತ್ತಿರುವುದಕ್ಕೆ ಆತಂಕ ಶುರುವಾಗಿದೆ. ಮಳೆ ಇಲ್ಲಿಗೆ ನಿಂತರೆ ಅನುಕೂಲ; ಇಲ್ಲವಾದರೆ ಬೆಳೆ ಹಾನಿಯಾಗುತ್ತದೆ ಎಂದು ಹಂಚಿನಾಳ ಗ್ರಾಮದ ರೈತ ಬಸಪ್ಪ ಮಾದರ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT