‘ದೆಹಲಿಯಿಂದ ಬಂದ 34 ಜನರ ಆರೋಗ್ಯ ಕುರಿತು ನಿಗಾ ವಹಿಸಲಾಗಿದೆ. 17 ಜನರ ಪ್ರಯೋಗಾಲಯದ ವರದಿಯಲ್ಲಿ ಸೋಂಕು ಕಂಡುಬಂದಿಲ್ಲ. ಉಳಿದ 17 ಜನರ ವರದಿ ಬರುವುದು ಬಾಕಿ ಇದೆ. ಲಾಕ್ಡೌನ್ ಅವಧಿಯಲ್ಲಿ ಕಡು ಬಡವರಿಗೆ ಉಚಿತವಾಗಿ ಹಾಲು ನೀಡಲು ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್ನಂತೆ ಹಾಲು ನೀಡುತ್ತಿದ್ದು, ಜಿಲ್ಲೆಗೆ 25 ಸಾವಿರ ಲೀಟರ್ ಮಂಜೂರಾಗಿದೆ. ಕೆಎಂಎಫ್ ಮೂಲಕ ನೀಡಲಾಗುತ್ತಿರುವ ಹಾಲಿನ ಪ್ರಮಾಣ ಹೆಚ್ಚಿಸಿದರೆ, ಈ ಕುಟುಂಬಗಳಿಗೆ ನಿತ್ಯ ತಲಾ ಒಂದು ಲೀಟರ್ ಹಾಲು ಕೊಡಲು ಸಾಧ್ಯವಾಗಲಿದೆ’ ಎದು ಶೆಟ್ಟರ್ ಹೇಳಿದರು.