ದೂರಿನಲ್ಲಿ ಏನಿದೆ?: 2022ರ ಡಿಸೆಂಬರ್ನಲ್ಲಿ ನಿಖಿಲ್ ಹಾಗೂ ಪ್ರೀತಿ ಮದುವೆ ಮಾಡಲಾಗಿತ್ತು. ಶ್ರಾವಣದ ಸಂದರ್ಭ ತವರಿಗೆ ಹೋಗಿದ್ದಳು. ಮತ್ತೊಬ್ಬ ಹುಡುಗನ ಜೊತೆ ಅವಳು ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ನಿಖಿಲ್ಗೆ ತಿಳಿದಿದ್ದು, ಅದರ ವಿಡಿಯೊ ಸಹ ದೊರೆತಿತ್ತು. ಪ್ರಕರಣಕ್ಕೆ ಸಂಬಂಧಿಸಿ ನ. 2ರಂದು ಕೇಶ್ವಾಪುರ ಠಾಣೆಗೆ ನಿಖಿಲ್ನನ್ನು ಕರೆಸಿ, ಶುಕ್ರವಾರ(ನ. 3) ಮಧ್ಯಾಹ್ನ 12 ರಿಂದ 2ರ ಒಳಗೆ, ಮದುವೆ ಸಂದರ್ಭ ನೀಡಿದ್ದ ₹2 ಲಕ್ಷ ಹಣ, ಬಾಂಡೆ ಸಾಮಗ್ರಿ ಹಾಗೂ ಚಿನ್ನಾಭರಣ ನೀಡಬೇಕು. ಇಲ್ಲದಿದ್ದರೆ ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.