<p><strong>ಹುಬ್ಬಳ್ಳಿ:</strong> ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆಹಾನಿ ಉಂಟಾಗಿ ಸಂಕಷ್ಟಕ್ಕೀಡಾಗಿರುವ ರೈತರಿಗೆ ಸರ್ಕಾರ ನೀಡುತ್ತಿರುವ ಪರಿಹಾರ ಅಲ್ಪ ಪ್ರಮಾಣದ್ದಾಗಿದೆ. ಬೆಳೆ ಬೆಳೆಯಲು ಮಾಡಿದ ವೆಚ್ಚಕ್ಕೂ, ಪರಿಹಾರಕ್ಕೂ ಅಜಗಜಾಂತರವಿದೆ ಎಂಬ ಆಕ್ಷೇಪ ರೈತರಿಂದ ಕೇಳಿಬರುತ್ತಿದೆ.</p>.<p>ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪರಿಹಾರ ಹೆಚ್ಚಿಸಿದ್ದು, ಮಳೆಯಾಶ್ರಿತ ಬೆಳೆ ಹೆಕ್ಟೇರ್ಗೆ ಒಟ್ಟು ₹13,600, ನೀರಾವರಿ ಬೆಳೆಗೆ ₹25,000 ಹಾಗೂ ತೋಟಗಾರಿಕಾ ಬೆಳೆಗೆ ₹28,000 ಪರಿಹಾರ ನೀಡಲಾಗುತ್ತಿದೆ. ಇಷ್ಟು ಪರಿಹಾರ ನೀಡಿದರೂ ರೈತರಿಗಾದ ನಷ್ಟಕ್ಕೆ ಸಮವಾಗುವುದಿಲ್ಲ ಎಂಬುದು ರೈತರ ಅಭಿಪ್ರಾಯ.</p>.<p>‘ಕೃಷಿ ಭೂಮಿ ಸ್ವಚ್ಛ ಮಾಡುವ ಕೆಲಸದಿಂದ ಹಿಡಿದು, ಬೆಳೆ ರಾಶಿ ಮಾಡಿ ಸಾಗಿಸುವವರೆಗೆ ಹೆಕ್ಟೇರ್ಗೆ ಕನಿಷ್ಠ ₹30,000 ಖರ್ಚಾಗುತ್ತದೆ. ಕೃಷಿ ಕಾರ್ಮಿಕರ ಸಮಸ್ಯೆಯಿಂದ ಯಂತ್ರಗಳನ್ನೇ ಅವಲಂಬಿಸಬೇಕಿರುವ ಕಾರಣ ಕೃಷಿ ದುಬಾರಿಯಾಗಿದೆ. ಬೆಳೆಗೆ ಉತ್ತಮ ಬೆಲೆ ಇದ್ದರಷ್ಟೇ ರೈತರು ಒಂದಿಷ್ಟು ಲಾಭ ಕಾಣುತ್ತಾರೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಲಾಭ ಕಷ್ಟವಾಗಿದೆ. ಹೀಗಿರುವಾಗ, ಬೆಳೆ ನಷ್ಟಕ್ಕೆ ಸರ್ಕಾರ ನೀಡುತ್ತಿರುವ ಪರಿಹಾರ ಏನಕ್ಕೂ ಸಾಲುವುದಿಲ್ಲ’ ಎಂದು ರೈತ ಮುಖಂಡ ಸಿದ್ದು ತೇಜಿ ಹೇಳಿದರು.</p>.<p>‘ಎರಡೂವರೆ ಎಕರೆಯಲ್ಲಿ ಗೋವಿನಜೋಳ ಬೆಳೆದಿದ್ದೆ, ಮಳೆಯಿಂದ ಬಹುತೇಕ ಬೆಳೆ ನಷ್ಟವಾಯಿತು. ಬಿತ್ತನೆ ಬೀಜ, ಗೊಬ್ಬರ, ಕೃಷಿ ಕಾರ್ಮಿಕರಿಗೆ ಕೂಲಿ ಸೇರಿ ಎಕರೆಗೆ ₹15,000 ಖರ್ಚು ಮಾಡಿದ್ದೆ. ಆದರೆ ಪರಿಹಾರ ₹5,000 ಮಾತ್ರ ನೀಡಿದ್ದಾರೆ. ಮೂರು ವರ್ಷಗಳಲ್ಲಿ ಒಮ್ಮೆಯೂ ವಿಮೆ ಹಣ ಬಂದಿಲ್ಲ. ಈ ಬಾರಿ ವಿಮೆಯ ಹಣ ನೀಡುವ ಭರವಸೆ ನೀಡಿದ್ದಾರೆ. ಬೇಸಾಯದಲ್ಲಿ ಆದಾಯ ಇಲ್ಲದ ಕಾರಣಕ್ಕೆ ಗುಳೆ ಹೋಗಬೇಕಾದ ಪರಿಸ್ಥಿತಿಯಿದೆ’ ಎಂದು ದ್ಯಾವನಕೊಂಡದ ಶಂಕರಗೌಡ ಫಕೀರಗೌಡ ಬಾವಿಕಟ್ಟಿ ಅಲವತ್ತುಕೊಂಡರು.</p>.<p>‘ಮಳೆಗೆ ಮೂರು ಎಕರೆಯಲ್ಲಿ ಬೆಳೆದಿದ್ದ ಭತ್ತ ಹಾನಿಯಾಯಿತು. ಕೇವಲ ₹10,200 ಪರಿಹಾರ ಖಾತೆಗೆ ಜಮಾ ಆಗಿದೆ. ಅಳಿದುಳಿದ ಭತ್ತ ಕಪ್ಪಾಗಿದ್ದು, ಕ್ವಿಂಟಲ್ಗೆ ₹800-900 ಮಾತ್ರ ಕೇಳುತ್ತಾರೆ. ಬೆಳೆವಿಮೆ ನೀಡಲು ಈವರೆಗೆ ಸಮೀಕ್ಷೆಗೂ ಯಾರೂ ಬಂದಿಲ್ಲ’ ಮಲಕನಕೊಪ್ಪದ ರೈತ ನಿಂಗಪ್ಪ ಮಾ. ಪಾಳೇದ ತಿಳಿಸಿದರು.</p>.<p><strong>ವಿಮೆಯಿಂದ ದೂರ ಉಳಿದ ಕೆಲ ರೈತರು:</strong> ‘ಬೆಳೆಗಳಿಗೆ ಸಮಸ್ಯೆಯಾದರೆ ಒಂದಿಷ್ಟು ಹಣವಾದರೂ ಸಿಗುತ್ತದೆ ಎಂಬ ಆಸೆಯಿಂದ ಈ ಮೊದಲು ಬೆಳೆವಿಮೆ ಕಟ್ಟುತ್ತಿದ್ದೆ. ಕಳೆದ ವರ್ಷ ಬೆಳೆಹಾನಿಯಾದಾಗ ಸಿಕ್ಕ ವಿಮೆ ಹಣ ತೀರಾ ಕಡಿಮೆಯಾಗಿತ್ತು. ಅದೇ ಕಾರಣಕ್ಕೆ ಈ ವರ್ಷ ವಿಮೆಯಿಂದ ದೂರ ಉಳಿದೆ. ಸರ್ಕಾರ ನೀಡುವ ಪರಿಹಾರಕ್ಕಾಗಿ ಎದುರು ನೋಡುತ್ತಿರುವೆ’ ಎಂದು ಕಲಘಟಗಿ ತಾಲ್ಲೂಕು ಬೇಗೂರಿನ ರೈತ ಸಾನಂದ ಮಲ್ಲೇಶಪ್ಪ ಮೇಟಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆಹಾನಿ ಉಂಟಾಗಿ ಸಂಕಷ್ಟಕ್ಕೀಡಾಗಿರುವ ರೈತರಿಗೆ ಸರ್ಕಾರ ನೀಡುತ್ತಿರುವ ಪರಿಹಾರ ಅಲ್ಪ ಪ್ರಮಾಣದ್ದಾಗಿದೆ. ಬೆಳೆ ಬೆಳೆಯಲು ಮಾಡಿದ ವೆಚ್ಚಕ್ಕೂ, ಪರಿಹಾರಕ್ಕೂ ಅಜಗಜಾಂತರವಿದೆ ಎಂಬ ಆಕ್ಷೇಪ ರೈತರಿಂದ ಕೇಳಿಬರುತ್ತಿದೆ.</p>.<p>ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪರಿಹಾರ ಹೆಚ್ಚಿಸಿದ್ದು, ಮಳೆಯಾಶ್ರಿತ ಬೆಳೆ ಹೆಕ್ಟೇರ್ಗೆ ಒಟ್ಟು ₹13,600, ನೀರಾವರಿ ಬೆಳೆಗೆ ₹25,000 ಹಾಗೂ ತೋಟಗಾರಿಕಾ ಬೆಳೆಗೆ ₹28,000 ಪರಿಹಾರ ನೀಡಲಾಗುತ್ತಿದೆ. ಇಷ್ಟು ಪರಿಹಾರ ನೀಡಿದರೂ ರೈತರಿಗಾದ ನಷ್ಟಕ್ಕೆ ಸಮವಾಗುವುದಿಲ್ಲ ಎಂಬುದು ರೈತರ ಅಭಿಪ್ರಾಯ.</p>.<p>‘ಕೃಷಿ ಭೂಮಿ ಸ್ವಚ್ಛ ಮಾಡುವ ಕೆಲಸದಿಂದ ಹಿಡಿದು, ಬೆಳೆ ರಾಶಿ ಮಾಡಿ ಸಾಗಿಸುವವರೆಗೆ ಹೆಕ್ಟೇರ್ಗೆ ಕನಿಷ್ಠ ₹30,000 ಖರ್ಚಾಗುತ್ತದೆ. ಕೃಷಿ ಕಾರ್ಮಿಕರ ಸಮಸ್ಯೆಯಿಂದ ಯಂತ್ರಗಳನ್ನೇ ಅವಲಂಬಿಸಬೇಕಿರುವ ಕಾರಣ ಕೃಷಿ ದುಬಾರಿಯಾಗಿದೆ. ಬೆಳೆಗೆ ಉತ್ತಮ ಬೆಲೆ ಇದ್ದರಷ್ಟೇ ರೈತರು ಒಂದಿಷ್ಟು ಲಾಭ ಕಾಣುತ್ತಾರೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಲಾಭ ಕಷ್ಟವಾಗಿದೆ. ಹೀಗಿರುವಾಗ, ಬೆಳೆ ನಷ್ಟಕ್ಕೆ ಸರ್ಕಾರ ನೀಡುತ್ತಿರುವ ಪರಿಹಾರ ಏನಕ್ಕೂ ಸಾಲುವುದಿಲ್ಲ’ ಎಂದು ರೈತ ಮುಖಂಡ ಸಿದ್ದು ತೇಜಿ ಹೇಳಿದರು.</p>.<p>‘ಎರಡೂವರೆ ಎಕರೆಯಲ್ಲಿ ಗೋವಿನಜೋಳ ಬೆಳೆದಿದ್ದೆ, ಮಳೆಯಿಂದ ಬಹುತೇಕ ಬೆಳೆ ನಷ್ಟವಾಯಿತು. ಬಿತ್ತನೆ ಬೀಜ, ಗೊಬ್ಬರ, ಕೃಷಿ ಕಾರ್ಮಿಕರಿಗೆ ಕೂಲಿ ಸೇರಿ ಎಕರೆಗೆ ₹15,000 ಖರ್ಚು ಮಾಡಿದ್ದೆ. ಆದರೆ ಪರಿಹಾರ ₹5,000 ಮಾತ್ರ ನೀಡಿದ್ದಾರೆ. ಮೂರು ವರ್ಷಗಳಲ್ಲಿ ಒಮ್ಮೆಯೂ ವಿಮೆ ಹಣ ಬಂದಿಲ್ಲ. ಈ ಬಾರಿ ವಿಮೆಯ ಹಣ ನೀಡುವ ಭರವಸೆ ನೀಡಿದ್ದಾರೆ. ಬೇಸಾಯದಲ್ಲಿ ಆದಾಯ ಇಲ್ಲದ ಕಾರಣಕ್ಕೆ ಗುಳೆ ಹೋಗಬೇಕಾದ ಪರಿಸ್ಥಿತಿಯಿದೆ’ ಎಂದು ದ್ಯಾವನಕೊಂಡದ ಶಂಕರಗೌಡ ಫಕೀರಗೌಡ ಬಾವಿಕಟ್ಟಿ ಅಲವತ್ತುಕೊಂಡರು.</p>.<p>‘ಮಳೆಗೆ ಮೂರು ಎಕರೆಯಲ್ಲಿ ಬೆಳೆದಿದ್ದ ಭತ್ತ ಹಾನಿಯಾಯಿತು. ಕೇವಲ ₹10,200 ಪರಿಹಾರ ಖಾತೆಗೆ ಜಮಾ ಆಗಿದೆ. ಅಳಿದುಳಿದ ಭತ್ತ ಕಪ್ಪಾಗಿದ್ದು, ಕ್ವಿಂಟಲ್ಗೆ ₹800-900 ಮಾತ್ರ ಕೇಳುತ್ತಾರೆ. ಬೆಳೆವಿಮೆ ನೀಡಲು ಈವರೆಗೆ ಸಮೀಕ್ಷೆಗೂ ಯಾರೂ ಬಂದಿಲ್ಲ’ ಮಲಕನಕೊಪ್ಪದ ರೈತ ನಿಂಗಪ್ಪ ಮಾ. ಪಾಳೇದ ತಿಳಿಸಿದರು.</p>.<p><strong>ವಿಮೆಯಿಂದ ದೂರ ಉಳಿದ ಕೆಲ ರೈತರು:</strong> ‘ಬೆಳೆಗಳಿಗೆ ಸಮಸ್ಯೆಯಾದರೆ ಒಂದಿಷ್ಟು ಹಣವಾದರೂ ಸಿಗುತ್ತದೆ ಎಂಬ ಆಸೆಯಿಂದ ಈ ಮೊದಲು ಬೆಳೆವಿಮೆ ಕಟ್ಟುತ್ತಿದ್ದೆ. ಕಳೆದ ವರ್ಷ ಬೆಳೆಹಾನಿಯಾದಾಗ ಸಿಕ್ಕ ವಿಮೆ ಹಣ ತೀರಾ ಕಡಿಮೆಯಾಗಿತ್ತು. ಅದೇ ಕಾರಣಕ್ಕೆ ಈ ವರ್ಷ ವಿಮೆಯಿಂದ ದೂರ ಉಳಿದೆ. ಸರ್ಕಾರ ನೀಡುವ ಪರಿಹಾರಕ್ಕಾಗಿ ಎದುರು ನೋಡುತ್ತಿರುವೆ’ ಎಂದು ಕಲಘಟಗಿ ತಾಲ್ಲೂಕು ಬೇಗೂರಿನ ರೈತ ಸಾನಂದ ಮಲ್ಲೇಶಪ್ಪ ಮೇಟಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>