ಇದು ಹುಬ್ಬಳ್ಳಿಯ ಉಣಕಲ್ ಗ್ರಾಮದ ನೂರಾರು ರೈತರ ನೋವಿನ ಮಾತು. ಹಿಂಗಾರು, ಮುಂಗಾರು ಬೆಳೆ ಉತ್ತಮವಾಗಿ ಬಂದರೆ ಮಾತ್ರ ಇವರ ಬದುಕು ಹಸನಾಗುತ್ತದೆ. ಆದರೆ, ಇತ್ತೀಚಿನ ಐದಾರು ವರ್ಷಗಳಿಂದ ಆವರಿಸಿದ ಬರದಿಂದ ರೈತರೆಲ್ಲ ಕಂಗೆಟ್ಟು ಹೋಗಿದ್ದರು. ಪ್ರಸ್ತುತ ಮುಂಗಾರಿನಲ್ಲಿ ಶೇಂಗಾ, ಉದ್ದು, ಸೋಯಾಬಿನ್, ಮೆಣಸು, ಅಲಸಂದೆ ಹಾಕಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಅತಿವೃಷ್ಟಿಯಿಂದಾಗಿ ಬೆಳೆಗಳೆಲ್ಲ ಕೊಳೆತು ಹೋಗಿವೆ.