ಮೀನು ಸಾಕಾಣಿಕೆ ಉದ್ದೇಶಕ್ಕೆ ಐದು ವರ್ಷಗಳ ಹಿಂದೆ ಮೀನುಗಾರಿಕೆ ಇಲಾಖೆಯ ಟೆಂಡರ್ ಪಡೆದಿದ್ದೆವು. 2019 ಜುಲೈನಲ್ಲಿ ರಘು, ಮಿರ್ಗಲ್, ಕನ್ನಡಿ ಜಾತಿಯ 56 ಸಾವಿರ ಮೀನಿನ ಮರಿಗಳನ್ನು ಬಿಡಲಾಗಿತ್ತು. ಮೀನು ಹಿಡಿಯುವ ಹೊತ್ತಿಗೆ ಕೊರೊನಾ ಸೋಂಕು ವ್ಯಾಪಿಸಿತು. ಹಾಗಾಗಿ ಮೀನು ಹಿಡಿಯಲು ಆಗಲಿಲ್ಲ. ಒಂದೊಂದು ಮೀನು ಅರ್ಧ ಕೆ.ಜಿ. ತೂಗುತ್ತವೆ. ಈಗ ಅವುಗಳ ಮಾರಣ ಹೋಮದಿಂದ ಅಂದಾಜು ₹5ರಿಂದ ₹6 ಲಕ್ಷ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಮೀನುಗಾರಿಕೆ ಇಲಾಖೆ ನಿರ್ದೇಶನದಂತೆ ಸುಣ್ಣ ಹಾಗೂ ಉಪ್ಪು ಹಾಕಲಾಗಿದೆ ಎಂದರು.