<p><strong>ಧಾರವಾಡ:</strong> ‘ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಎರಡು ದಿನ ಹಿಂದೆ ಅಪರಿಚಿತರು ಪ್ರತಿಷ್ಠಾಪಿಸಿದ ಅಯ್ಯಪ್ಪಸ್ವಾಮಿ ಮೂರ್ತಿ ಆರಾಧಿಸಲು, ದೇವಸ್ಥಾನ ನಿರ್ಮಿಸಲು ಕೃಷಿ ವಿ.ವಿ, ಸರ್ಕಾರ ವಿರೋಧಿಸಿದರೆ ಪ್ರತಿಭಟಿಸುತ್ತೇವೆ’ ಎಂದು ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.</p><p>ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಯ್ಯಪ್ಪ ಸ್ವಾಮಿ ಮತ್ತು ಸುಬ್ರಮಣ್ಯ ಮೂರ್ತಿಯನ್ನು ಅಲ್ಲಿ ಯಾರು ಪ್ರತಿಷ್ಠಾಪಿಸಿದ್ದಾರೆ ಎಂಬುದು ಗೊತ್ತಿಲ್ಲ. ಶಾಸ್ತ್ರೋಕ್ತ ರೀತಿಯಲ್ಲಿ ಪ್ರತಿಷ್ಠಾಪನೆ ಆಗಿದೆ. ಇದೊಂದು ಚಮತ್ಕಾರದಂತಿದೆ. ಮೂರ್ತಿ ಆರಾಧನೆಗೆ ಯಾರೂ ಅಡ್ಡಿ ಮಾಡಬಾರದು’ ಎಂದರು.</p><p>‘ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿ ಇರುವ ಸ್ಥಳಕ್ಕೆ ಧಾರವಾಡದ ಅಯ್ಯಪ್ಪ ಸ್ವಾಮಿ ಮಂಡಳಿಯವರು, ಸ್ವಾಮಿಗಳನ್ನು ಕರೆಸಿ ಇಲ್ಲಿಯೇ ಅನ್ನದಾನ, ಪೂಜೆ ಮಾಡುವ ಯೋಚನೆ ಇದೆ’ ಎಂದು ತಿಳಿಸಿದರು.</p><p>‘ಕೃಷಿ ವಿ.ವಿ ಜಾಗದಲ್ಲಿ ಮಸೀದಿ ಮತ್ತು ಗೋರಿಗಳು ಇವೆ. ಮೂರ್ತಿ ತೆರವುಗೊಳಿಸುವುದಾದರೆ ಮಸೀದಿ, ಗೋರಿಗಳನ್ನು ತೆರವುಗೊಳಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಎರಡು ದಿನ ಹಿಂದೆ ಅಪರಿಚಿತರು ಪ್ರತಿಷ್ಠಾಪಿಸಿದ ಅಯ್ಯಪ್ಪಸ್ವಾಮಿ ಮೂರ್ತಿ ಆರಾಧಿಸಲು, ದೇವಸ್ಥಾನ ನಿರ್ಮಿಸಲು ಕೃಷಿ ವಿ.ವಿ, ಸರ್ಕಾರ ವಿರೋಧಿಸಿದರೆ ಪ್ರತಿಭಟಿಸುತ್ತೇವೆ’ ಎಂದು ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.</p><p>ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಯ್ಯಪ್ಪ ಸ್ವಾಮಿ ಮತ್ತು ಸುಬ್ರಮಣ್ಯ ಮೂರ್ತಿಯನ್ನು ಅಲ್ಲಿ ಯಾರು ಪ್ರತಿಷ್ಠಾಪಿಸಿದ್ದಾರೆ ಎಂಬುದು ಗೊತ್ತಿಲ್ಲ. ಶಾಸ್ತ್ರೋಕ್ತ ರೀತಿಯಲ್ಲಿ ಪ್ರತಿಷ್ಠಾಪನೆ ಆಗಿದೆ. ಇದೊಂದು ಚಮತ್ಕಾರದಂತಿದೆ. ಮೂರ್ತಿ ಆರಾಧನೆಗೆ ಯಾರೂ ಅಡ್ಡಿ ಮಾಡಬಾರದು’ ಎಂದರು.</p><p>‘ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿ ಇರುವ ಸ್ಥಳಕ್ಕೆ ಧಾರವಾಡದ ಅಯ್ಯಪ್ಪ ಸ್ವಾಮಿ ಮಂಡಳಿಯವರು, ಸ್ವಾಮಿಗಳನ್ನು ಕರೆಸಿ ಇಲ್ಲಿಯೇ ಅನ್ನದಾನ, ಪೂಜೆ ಮಾಡುವ ಯೋಚನೆ ಇದೆ’ ಎಂದು ತಿಳಿಸಿದರು.</p><p>‘ಕೃಷಿ ವಿ.ವಿ ಜಾಗದಲ್ಲಿ ಮಸೀದಿ ಮತ್ತು ಗೋರಿಗಳು ಇವೆ. ಮೂರ್ತಿ ತೆರವುಗೊಳಿಸುವುದಾದರೆ ಮಸೀದಿ, ಗೋರಿಗಳನ್ನು ತೆರವುಗೊಳಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>