’ಕೋವಿಡ್ 19ನಿಂದ ಗುಣಮುಖರಾದ ಬಳಿಕ ಬಹಳಷ್ಟು ಜನ ನಮ್ಮ ಕುಟುಂಬದವರನ್ನು ಕೀಳಾಗಿ ಕಾಣುತ್ತಿದ್ದಾರೆ. ನಮ್ಮ ಅಕ್ಕಪಕ್ಕದ ಮನೆಯವರು ಕ್ವಾರಂಟೈನ್ ಆಗಿದ್ದಕ್ಕೆ ಅವರಲ್ಲಿ ಕೆಲವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಬಹಳಷ್ಟು ಜನ ನಮ್ಮ ಮನೆಗೆ ಬರುವುದನ್ನೇ ಬಿಟ್ಟಿದ್ದಾರೆ. ಆದ್ದರಿಂದ ಕಿಮ್ಸ್ ವೈದ್ಯ ಸಚಿನ್ ಹೊಸಕಟ್ಟಿ ನಮ್ಮ ಮನೆಗೆ ಬಂದು ಅಕ್ಕಪಕ್ಕದ ಜನರಲ್ಲಿನ ಆತಂಕವನ್ನು ದೂರ ಮಾಡುತ್ತಿದ್ದಾರೆ’ ಎಂದರು.