<p><strong>ಹುಬ್ಬಳ್ಳಿ: </strong>ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ವಾರಿಯರ್ಸ್ಗಳಾದ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿದರು.</p>.<p>ಭಾರತ ವೈದ್ಯಕೀಯ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಪದಾಧಿಕಾರಿಗಳು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಅರುಣಕುಮಾರ, ಡಿಎಚ್ಒ ಯಶವಂತ ಮದೀನಕರ ಸೇರಿದಂತೆ ಹಲವು ವೈದ್ಯರನ್ನು ಸನ್ಮಾನಿಸಲಾಯಿತು.</p>.<p>ಶಾಖೆಯ ಅಧ್ಯಕ್ಷ ಕ್ರಾಂತಿಕಿರಣ, ಜಿ.ಬಿ. ಸತ್ತೂರು ಸೇರಿದಂತೆ ಹಲವು ವೈದ್ಯರು ಪಾಲ್ಗೊಂಡಿದ್ದರು. ಅಲ್ಲಿಯೇ ಇದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>‘ವೈದ್ಯರ ದಿನದಂದು ಕಿಮ್ಸ್ನಲ್ಲಿ ಪ್ರತಿ ವರ್ಷ ಯಾವ ಕಾರ್ಯಕ್ರಮ ಆಯೋಜಿಸುವ ಪರಿಪಾಠ ಇಲ್ಲ. ಹೊರಗಿನಿಂದ ಬಂದು ವೈದ್ಯರೇ ಗೌರವಿಸುವ ಸಂಪ್ರದಾಯ ರೂಢಿಯಲ್ಲಿದೆ’ ಎಂದು ಅಂಟರತಾನಿ ಹೇಳಿದರು.</p>.<p>ಅಂದಾನಿಮಠ ಲಾ ಅಕಾಡೆಮಿ ವತಿಯಿಂದ ನಗರದ ಮನೋವೈದ್ಯ ವಿನೋದ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಅಧ್ಯಕ್ಷ ಜಿ. ಆರ್. ಅಂದಾನಿಮಠ, ಪ್ರಕಾಶ ಅಂದಾನಿಮಠ, ಜ್ಯೋತಿ ಸಾಲಿಮಠ, ಏಕಬೋಟೆ, ವಕೀಲರಾದ ಅಕ್ಕೂರ, ಬೂದಿಹಾಳ, ರಾಜೇಶ, ಅನುಪಮಾ, ಗುರು ಹಿರೇಮಠ ಇದ್ದರು.</p>.<p>ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ ವೈದ್ಯ ಗೋವಿಂದ ಮಣ್ಣೂರು ಅವರಿಗೆ ಸನ್ಮಾನಿಸಿದರು. ಮಲ್ಲಿಕ್ ಸಿಕಂದರ್, ಸುನಿಲ್ ಕುರುಡೆಕರ್ ಇದ್ದರು. ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ಕಿಮ್ಸ್ ಸಿಬ್ಬಂದಿಗೆ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ವಾರಿಯರ್ಸ್ಗಳಾದ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿದರು.</p>.<p>ಭಾರತ ವೈದ್ಯಕೀಯ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಪದಾಧಿಕಾರಿಗಳು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಅರುಣಕುಮಾರ, ಡಿಎಚ್ಒ ಯಶವಂತ ಮದೀನಕರ ಸೇರಿದಂತೆ ಹಲವು ವೈದ್ಯರನ್ನು ಸನ್ಮಾನಿಸಲಾಯಿತು.</p>.<p>ಶಾಖೆಯ ಅಧ್ಯಕ್ಷ ಕ್ರಾಂತಿಕಿರಣ, ಜಿ.ಬಿ. ಸತ್ತೂರು ಸೇರಿದಂತೆ ಹಲವು ವೈದ್ಯರು ಪಾಲ್ಗೊಂಡಿದ್ದರು. ಅಲ್ಲಿಯೇ ಇದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>‘ವೈದ್ಯರ ದಿನದಂದು ಕಿಮ್ಸ್ನಲ್ಲಿ ಪ್ರತಿ ವರ್ಷ ಯಾವ ಕಾರ್ಯಕ್ರಮ ಆಯೋಜಿಸುವ ಪರಿಪಾಠ ಇಲ್ಲ. ಹೊರಗಿನಿಂದ ಬಂದು ವೈದ್ಯರೇ ಗೌರವಿಸುವ ಸಂಪ್ರದಾಯ ರೂಢಿಯಲ್ಲಿದೆ’ ಎಂದು ಅಂಟರತಾನಿ ಹೇಳಿದರು.</p>.<p>ಅಂದಾನಿಮಠ ಲಾ ಅಕಾಡೆಮಿ ವತಿಯಿಂದ ನಗರದ ಮನೋವೈದ್ಯ ವಿನೋದ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಅಧ್ಯಕ್ಷ ಜಿ. ಆರ್. ಅಂದಾನಿಮಠ, ಪ್ರಕಾಶ ಅಂದಾನಿಮಠ, ಜ್ಯೋತಿ ಸಾಲಿಮಠ, ಏಕಬೋಟೆ, ವಕೀಲರಾದ ಅಕ್ಕೂರ, ಬೂದಿಹಾಳ, ರಾಜೇಶ, ಅನುಪಮಾ, ಗುರು ಹಿರೇಮಠ ಇದ್ದರು.</p>.<p>ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ ವೈದ್ಯ ಗೋವಿಂದ ಮಣ್ಣೂರು ಅವರಿಗೆ ಸನ್ಮಾನಿಸಿದರು. ಮಲ್ಲಿಕ್ ಸಿಕಂದರ್, ಸುನಿಲ್ ಕುರುಡೆಕರ್ ಇದ್ದರು. ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ಕಿಮ್ಸ್ ಸಿಬ್ಬಂದಿಗೆ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>