ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ ವ್ಯಾಲ್ಯೂ ಇಲ್ಲದ ಫೇಸ್‌ಬುಕ್‌: ಜಗದೀಶ ಶೆಟ್ಟರ್‌

Last Updated 14 ಜೂನ್ 2021, 5:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ ಧಾರವಾಡ ಮಂದಿ (ಕರ್ನಾಟಕ) ಫೇಸ್‌ಬುಕ್‌ ಖಾತೆಯಲ್ಲಿ ‘ಮುಂದಿನ ಮುಖ್ಯಮಂತ್ರಿ ಉತ್ತರ ಕರ್ನಾಟಕ ವೀರಶೈವ ಮುಖಂಡ ಅರವಿಂದ ಬೆಲ್ಲದ್’ ಎಂದು ಬರೆದು ಅವರ ಫೋಟೊ ಜೊತೆ ಬೆಲ್ಲದ್ ಬೆಂಬಲಿಗರು ಮಾಡಿದ್ದಾರೆ ಎನ್ನಲಾದ ಪೋಸ್ಟ್‌ ಭಾನುವಾರ ಚರ್ಚೆಗೆ ಕಾರಣವಾಗಿತ್ತು.

ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವ ಜಗದೀಶ ಶೆಟ್ಟರ್‌, ‘ಫೇಸ್‌ಬುಕ್‌ಗೆ ಫೇಸ್‌ ವ್ಯಾಲ್ಯೂ ಇಲ್ಲದಂತಾಗಿದೆ. ಅದರಲ್ಲಿ ಯಾರು ಬೇಕಾದರೂ ಖಾತೆ ತೆರೆದು, ಏನು ಬೇಕಾದರೂ ಪೋಸ್ಟ್‌ ಮಾಡಬಹುದು.ನಾನೇ ಪ್ರಧಾನಿ ಎಂದು ಸಹ ಪೋಸ್ಟ್‌ ಮಾಡಬಹುದು. ಬೆಲ್ಲದ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಯಾರು ಪೋಸ್ಟ್‌ ಮಾಡಿದ್ದಾರೋ ಅವರನ್ನೇ ಕೇಳಿ’ ಎಂದರು.

ಈ ಕುರಿತು ಶಾಸಕ ಅರವಿಂದ ಬೆಲ್ಲದ ಅವರಿಗೆ ಕರೆ ಮಾಡಿದಾಗ, ಪ್ರತಿಕ್ರಿಯೆಗೆ ಸಿಗಲಿಲ್ಲ.

‘ಹುಬ್ಬಳ್ಳಿ ಧಾರವಾಡ ಮಂದಿ(ಕರ್ನಾಟಕ)’ ಫೆಸ್‌ಬುಕ್‌ ಖಾತೆಯಲ್ಲಿಮುಂದಿನ ಮುಖ್ಯಮಂತ್ರಿ ಅರವಿಂದ ಬೆಲ್ಲದ ಎಂದು ಪೋಸ್ಟ್ ಮಾಡಲಾಗಿದೆ
‘ಹುಬ್ಬಳ್ಳಿ ಧಾರವಾಡ ಮಂದಿ(ಕರ್ನಾಟಕ)’ ಫೆಸ್‌ಬುಕ್‌ ಖಾತೆಯಲ್ಲಿ
ಮುಂದಿನ ಮುಖ್ಯಮಂತ್ರಿ ಅರವಿಂದ ಬೆಲ್ಲದ ಎಂದು ಪೋಸ್ಟ್ ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT