<p><strong>ಅಣ್ಣಿಗೇರಿ:</strong> ಪಟ್ಟಣದ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ಸಮೂಹ ವಿದ್ಯಾಲಯದ ಪ್ರಾಚಾರ್ಯ, ಸಾಹಿತಿ ಪ್ರೊ ಎಸ್.ಎಸ್.ಹರ್ಲಾಪೂರ ಅವರಿಗೆ ರನ್ನಕವಿ ಕಲಾ ಸಾಹಿತ್ಯ ಬಳಗ ನೀಡುವ ಕವಿಚಕ್ರವರ್ತಿ ರನ್ನ ಪ್ರಶಸ್ತಿಯನ್ನು ಭಾನುವಾರ ನೀಡಿ ಗೌರವಿಸಲಾಯಿತು.</p>.<p>ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಹರ್ಲಾಪೂರ, ‘ನಾವು ಮಾಡುವ ಕಾಯಕದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಮುಂದೊಂದು ದಿನ ಒಳ್ಳೆಯ ಸಮಯ ಬಂದೇ ಬರುತ್ತೆ ಎನ್ನುವದಕ್ಕೆ ಈ ಪ್ರಶಸ್ತಿಯೇ ಸಾಕ್ಷಿಯಾಗಿದೆ. ನಾವು ಯಾವ ಕೆಲಸವನ್ನು ಮಾಡುತ್ತವೆಯೋ ಆ ಕೆಲಸ ನಮ್ಮ ಮನಸ್ಸಿಗೆ ತೃಪ್ತಿ ತರುವಂತಾಗಿರಬೇಕು’ ಎಂದರು.</p>.<p>‘ಆದಿಕವಿ ಪಂಪ ಜನಿಸಿದ ಮನೆಯಲ್ಲಿಯೇ ನನಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ಪಟ್ಟಣದಲ್ಲಿ ಪಂಪಸ್ಮಾರಕ ಭವನ ನಿರ್ಮಾಣಕ್ಕಾಗಿ ಹೋರಾಡಿದ ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ಸ್ಮರಣೆ ಮಾಡುವದು ಅತ್ಯಗತ್ಯ’ ಎಂದರು.</p>.<p>ಪಂಪಸ್ಮಾರಕ ಭವನದಲ್ಲಿ ಆದಿಕವಿ ಪಂಪನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ, ಪಟ್ಟಣದ ಎರಡು ಬದಿಯಲ್ಲೂ ಆದಿಕವಿ ಪಂಪನ ಜನ್ಮಸ್ಥಳ ಎಂಬ ಮಹಾದ್ವಾರವನ್ನು ಅಳವಡಿಸಲು ಸ್ಥಳೀಯ ಆಡಳಿತ ಮುಂದಾಗಬೇಕು ಎಂದರು.</p>.<p>ದಕ್ಷಿಣ ಭಾರತ ಜೈನ್ ಸಮಾಜದ ಸದಸ್ಯ ಸುರೇಂದ್ರ ನಾವಳ್ಳಿ ಮಾತನಾಡಿ, ಮುಂದಿನ ಒಂದು ತಿಂಗಳೊಳಗೆ ಆದಿಕವಿ ಪಂಪನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಭರವಸೆ ನೀಡಿದರು.</p>.<p>ರನ್ನಕವಿ ಕಲಾ ಸಾಹಿತ್ಯ ಬಳಗದ ಅಧ್ಯಕ್ಷ ದೇವರಾಜ ನಾವಳ್ಳಿ ಅಧ್ಯಕ್ಷತೆ ವಹಿಸಿದ್ದರು.<br> ಈ ಸಂದರ್ಭದಲ್ಲಿ ಅನ್ವರಭಾಷಾ ಹುಬ್ಬಳ್ಳಿ, ಎನ್.ಎಸ್.ಮೇಲ್ಮರಿ, ರವಿರಾಜ ವೇರ್ಣೆಕರ, ಮಂಜುನಾಥ ತಿಗಡಿ, ಲಲಿತಾ ಸಾಲಿಮಠ, ಪದ್ಮರಾಜ ಅಂತಣ್ಣವರ, ಪಾಂಡುರಂಗ ಓಸೇಕರ, ಐ.ಬಿ.ಅಕ್ಕಿ ಉಪಸ್ಥಿತರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಣ್ಣಿಗೇರಿ:</strong> ಪಟ್ಟಣದ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ಸಮೂಹ ವಿದ್ಯಾಲಯದ ಪ್ರಾಚಾರ್ಯ, ಸಾಹಿತಿ ಪ್ರೊ ಎಸ್.ಎಸ್.ಹರ್ಲಾಪೂರ ಅವರಿಗೆ ರನ್ನಕವಿ ಕಲಾ ಸಾಹಿತ್ಯ ಬಳಗ ನೀಡುವ ಕವಿಚಕ್ರವರ್ತಿ ರನ್ನ ಪ್ರಶಸ್ತಿಯನ್ನು ಭಾನುವಾರ ನೀಡಿ ಗೌರವಿಸಲಾಯಿತು.</p>.<p>ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಹರ್ಲಾಪೂರ, ‘ನಾವು ಮಾಡುವ ಕಾಯಕದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಮುಂದೊಂದು ದಿನ ಒಳ್ಳೆಯ ಸಮಯ ಬಂದೇ ಬರುತ್ತೆ ಎನ್ನುವದಕ್ಕೆ ಈ ಪ್ರಶಸ್ತಿಯೇ ಸಾಕ್ಷಿಯಾಗಿದೆ. ನಾವು ಯಾವ ಕೆಲಸವನ್ನು ಮಾಡುತ್ತವೆಯೋ ಆ ಕೆಲಸ ನಮ್ಮ ಮನಸ್ಸಿಗೆ ತೃಪ್ತಿ ತರುವಂತಾಗಿರಬೇಕು’ ಎಂದರು.</p>.<p>‘ಆದಿಕವಿ ಪಂಪ ಜನಿಸಿದ ಮನೆಯಲ್ಲಿಯೇ ನನಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ಪಟ್ಟಣದಲ್ಲಿ ಪಂಪಸ್ಮಾರಕ ಭವನ ನಿರ್ಮಾಣಕ್ಕಾಗಿ ಹೋರಾಡಿದ ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ಸ್ಮರಣೆ ಮಾಡುವದು ಅತ್ಯಗತ್ಯ’ ಎಂದರು.</p>.<p>ಪಂಪಸ್ಮಾರಕ ಭವನದಲ್ಲಿ ಆದಿಕವಿ ಪಂಪನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ, ಪಟ್ಟಣದ ಎರಡು ಬದಿಯಲ್ಲೂ ಆದಿಕವಿ ಪಂಪನ ಜನ್ಮಸ್ಥಳ ಎಂಬ ಮಹಾದ್ವಾರವನ್ನು ಅಳವಡಿಸಲು ಸ್ಥಳೀಯ ಆಡಳಿತ ಮುಂದಾಗಬೇಕು ಎಂದರು.</p>.<p>ದಕ್ಷಿಣ ಭಾರತ ಜೈನ್ ಸಮಾಜದ ಸದಸ್ಯ ಸುರೇಂದ್ರ ನಾವಳ್ಳಿ ಮಾತನಾಡಿ, ಮುಂದಿನ ಒಂದು ತಿಂಗಳೊಳಗೆ ಆದಿಕವಿ ಪಂಪನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಭರವಸೆ ನೀಡಿದರು.</p>.<p>ರನ್ನಕವಿ ಕಲಾ ಸಾಹಿತ್ಯ ಬಳಗದ ಅಧ್ಯಕ್ಷ ದೇವರಾಜ ನಾವಳ್ಳಿ ಅಧ್ಯಕ್ಷತೆ ವಹಿಸಿದ್ದರು.<br> ಈ ಸಂದರ್ಭದಲ್ಲಿ ಅನ್ವರಭಾಷಾ ಹುಬ್ಬಳ್ಳಿ, ಎನ್.ಎಸ್.ಮೇಲ್ಮರಿ, ರವಿರಾಜ ವೇರ್ಣೆಕರ, ಮಂಜುನಾಥ ತಿಗಡಿ, ಲಲಿತಾ ಸಾಲಿಮಠ, ಪದ್ಮರಾಜ ಅಂತಣ್ಣವರ, ಪಾಂಡುರಂಗ ಓಸೇಕರ, ಐ.ಬಿ.ಅಕ್ಕಿ ಉಪಸ್ಥಿತರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>