ಸೋಮವಾರ ಇಲ್ಲಿ ನಡೆದ ಕೆ.ಎಸ್.ಸಿ.ಎ ಧಾರವಾಡ ವಲಯದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ‘ಹಾಸನ, ದಾವಣಗೆರೆ ಮತ್ತು ಗದಗಿನಲ್ಲಿ ಸಮತಟ್ಟಾದ ಭೂಮಿ ಸಿಕ್ಕಿರುವುದರಿಂದ ಅಲ್ಲಿ ಮೈದಾನ ನಿರ್ಮಾಣ ಬೇಗ ಮುಗಿಯುತ್ತದೆ. ಕೊಡಗಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಒಂದೆರೆಡು ವರ್ಷ ಬೇಕಾಗುತ್ತದೆ. ಆರಂಭಿಕ ಹಂತದಲ್ಲಿ ಈ ಎಲ್ಲ ಊರುಗಳಲ್ಲಿ ಪಂದ್ಯವಾಡಲು ಅನುಕೂಲವಾಗುವಂತೆ ಮೈದಾನ ನಿರ್ಮಿಸಲಾಗುವುದು. ಎರಡನೇ ಹಂತದಲ್ಲಿ ಪೆವಿಲಿಯನ್ ಮತ್ತು ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದರು.