<p>ಹುಬ್ಬಳ್ಳಿ: ಪ್ಲಿಫ್ಕಾರ್ಟ್ನಲ್ಲಿ ಆರ್ಡರ್ ಮಾಡಿದ ವಸ್ತು ತಲುಪಿಸಲು ವಿಳಾಸ ತಪ್ಪಾಗಿದೆ ಎಂದು ಮಂಟೂರು ರಸ್ತೆಯ ಐ.ಎಲ್. ವಿಜಾಪುರ ಅವರಿಗೆ ಪ್ಲಿಫ್ಕಾರ್ಟ್ ಪ್ರತಿನಿಧಿಯೆಂದು ಕರೆ ಮಾಡಿದ ವ್ಯಕ್ತಿ, ಅವರ ಮೊಬೈಲ್ಗೆ ಲಿಂಕ್ ಕಳುಹಿಸಿ ₹80 ಸಾವಿರ ವರ್ಗಾಯಿಸಿಕೊಂಡಿದ್ದಾನೆ.</p>.<p>ಆರ್ಡರ್ ಮಾಡಿರುವ ವಿಳಾಸ ತಪ್ಪಾಗಿದ್ದು, ಅದನ್ನು ಸರಿಪಡಿಸಲು ₹5 ಆನ್ಲೈನ್ನಲ್ಲಿ ಕಳುಹಿಸಬೇಕು ಎಂದು ವಿಜಾಪುರ ಅವರ ಮೊಬೈಲ್ಗೆ ಒಟಿಪಿ ಹಾಗೂ ಲಿಂಕ್ ಕಳುಹಿಸಿದ್ದ. ಲಿಂಕ್ ತೆರೆದು ಮಾಹಿತಿ ಭರ್ತಿ ಮಾಡಿ ಯುಪಿಐ ಪಿನ್ ಹಾಕಿ ಸಬ್ಮಿಟ್ ಮಾಡಿದಾಗ ಹಣ ವರ್ಗಾವಣೆಯಾಗಿದೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ವಂಚನೆ:</strong> ಕೆವೈಸಿ ಅಪ್ಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆ ಬಂದ್ ಆಗುತ್ತದೆ ಎಂದು ಕೇಶ್ವಾಪುರದ ಟಿ.ಎಂ. ಡಿಸೋಜಾ ಅವರ ಮೊಬೈಲ್ ನಂಬರ್ಗೆ ಮೆಸೆಜ್ ಕಳುಹಿಸಿದ ವ್ಯಕ್ತಿ, ಅವರಿಂದಲೇ ಬ್ಯಾಂಕ್ ಮಾಹಿತಿ ಪಡೆದು ₹49 ಸಾವಿರ ವರ್ಗಾಯಿಸಿಕೊಂಡಿದ್ದಾನೆ.</p>.<p>ಡಿಸೋಜಾ ಅವರು ಮೆಸೆಜ್ ಬಂದ ನಂಬರ್ಗೆ ಕರೆ ಮಾಡಿದಾಗ ಬ್ಯಾಂಕ್ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಖಾತೆ ನಂಬರ್, ಎಟಿಎಂ ಕಾರ್ಡ್ ನಂಬರ್, ಸಿವಿವಿ ನಂಬರ್ ಹಾಗೂ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>₹61ಸಾವಿರ ವಂಚನೆ:</strong> ಆನ್ಲೈನ್ನಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಜನರೇಟ್ ಮಾಡಿಸಿಕೊಡುವುದಾಗಿ ಹೇಳಿ ಧಾರವಾಡದ ಚನ್ನಮ್ಮನಗರದ ನಿವಾಸಿ ಯೋಗೇಶ ಹಿರೇಮಠ ಅವರಿಗೆ ಕರೆ ಮಾಡಿದ ವಂಚಕ, ₹61ಸಾವಿರ ವರ್ಗಾಯಿಸಿಕೊಂಡಿದ್ದಾನೆ.</p>.<p>ಯೋಗೀಶ ಅವರಿಗೆ ಎನಿಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಲು ಹೇಳಿದ ವ್ಯಕ್ತಿ, ಕ್ರೆಡಿಟ್ ಕಾರ್ಡ್ ಮಾಹಿತಿ ಹಾಗೂ ಮೊಬೈಲ್ಗೆ ಬಂದ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಪ್ಲಿಫ್ಕಾರ್ಟ್ನಲ್ಲಿ ಆರ್ಡರ್ ಮಾಡಿದ ವಸ್ತು ತಲುಪಿಸಲು ವಿಳಾಸ ತಪ್ಪಾಗಿದೆ ಎಂದು ಮಂಟೂರು ರಸ್ತೆಯ ಐ.ಎಲ್. ವಿಜಾಪುರ ಅವರಿಗೆ ಪ್ಲಿಫ್ಕಾರ್ಟ್ ಪ್ರತಿನಿಧಿಯೆಂದು ಕರೆ ಮಾಡಿದ ವ್ಯಕ್ತಿ, ಅವರ ಮೊಬೈಲ್ಗೆ ಲಿಂಕ್ ಕಳುಹಿಸಿ ₹80 ಸಾವಿರ ವರ್ಗಾಯಿಸಿಕೊಂಡಿದ್ದಾನೆ.</p>.<p>ಆರ್ಡರ್ ಮಾಡಿರುವ ವಿಳಾಸ ತಪ್ಪಾಗಿದ್ದು, ಅದನ್ನು ಸರಿಪಡಿಸಲು ₹5 ಆನ್ಲೈನ್ನಲ್ಲಿ ಕಳುಹಿಸಬೇಕು ಎಂದು ವಿಜಾಪುರ ಅವರ ಮೊಬೈಲ್ಗೆ ಒಟಿಪಿ ಹಾಗೂ ಲಿಂಕ್ ಕಳುಹಿಸಿದ್ದ. ಲಿಂಕ್ ತೆರೆದು ಮಾಹಿತಿ ಭರ್ತಿ ಮಾಡಿ ಯುಪಿಐ ಪಿನ್ ಹಾಕಿ ಸಬ್ಮಿಟ್ ಮಾಡಿದಾಗ ಹಣ ವರ್ಗಾವಣೆಯಾಗಿದೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ವಂಚನೆ:</strong> ಕೆವೈಸಿ ಅಪ್ಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆ ಬಂದ್ ಆಗುತ್ತದೆ ಎಂದು ಕೇಶ್ವಾಪುರದ ಟಿ.ಎಂ. ಡಿಸೋಜಾ ಅವರ ಮೊಬೈಲ್ ನಂಬರ್ಗೆ ಮೆಸೆಜ್ ಕಳುಹಿಸಿದ ವ್ಯಕ್ತಿ, ಅವರಿಂದಲೇ ಬ್ಯಾಂಕ್ ಮಾಹಿತಿ ಪಡೆದು ₹49 ಸಾವಿರ ವರ್ಗಾಯಿಸಿಕೊಂಡಿದ್ದಾನೆ.</p>.<p>ಡಿಸೋಜಾ ಅವರು ಮೆಸೆಜ್ ಬಂದ ನಂಬರ್ಗೆ ಕರೆ ಮಾಡಿದಾಗ ಬ್ಯಾಂಕ್ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಖಾತೆ ನಂಬರ್, ಎಟಿಎಂ ಕಾರ್ಡ್ ನಂಬರ್, ಸಿವಿವಿ ನಂಬರ್ ಹಾಗೂ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>₹61ಸಾವಿರ ವಂಚನೆ:</strong> ಆನ್ಲೈನ್ನಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಜನರೇಟ್ ಮಾಡಿಸಿಕೊಡುವುದಾಗಿ ಹೇಳಿ ಧಾರವಾಡದ ಚನ್ನಮ್ಮನಗರದ ನಿವಾಸಿ ಯೋಗೇಶ ಹಿರೇಮಠ ಅವರಿಗೆ ಕರೆ ಮಾಡಿದ ವಂಚಕ, ₹61ಸಾವಿರ ವರ್ಗಾಯಿಸಿಕೊಂಡಿದ್ದಾನೆ.</p>.<p>ಯೋಗೀಶ ಅವರಿಗೆ ಎನಿಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಲು ಹೇಳಿದ ವ್ಯಕ್ತಿ, ಕ್ರೆಡಿಟ್ ಕಾರ್ಡ್ ಮಾಹಿತಿ ಹಾಗೂ ಮೊಬೈಲ್ಗೆ ಬಂದ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>