ಹುಬ್ಬಳ್ಳಿ: ಪ್ಲಿಫ್ಕಾರ್ಟ್ನಲ್ಲಿ ಆರ್ಡರ್ ಮಾಡಿದ ವಸ್ತು ತಲುಪಿಸಲು ವಿಳಾಸ ತಪ್ಪಾಗಿದೆ ಎಂದು ಮಂಟೂರು ರಸ್ತೆಯ ಐ.ಎಲ್. ವಿಜಾಪುರ ಅವರಿಗೆ ಪ್ಲಿಫ್ಕಾರ್ಟ್ ಪ್ರತಿನಿಧಿಯೆಂದು ಕರೆ ಮಾಡಿದ ವ್ಯಕ್ತಿ, ಅವರ ಮೊಬೈಲ್ಗೆ ಲಿಂಕ್ ಕಳುಹಿಸಿ ₹80 ಸಾವಿರ ವರ್ಗಾಯಿಸಿಕೊಂಡಿದ್ದಾನೆ.
ಆರ್ಡರ್ ಮಾಡಿರುವ ವಿಳಾಸ ತಪ್ಪಾಗಿದ್ದು, ಅದನ್ನು ಸರಿಪಡಿಸಲು ₹5 ಆನ್ಲೈನ್ನಲ್ಲಿ ಕಳುಹಿಸಬೇಕು ಎಂದು ವಿಜಾಪುರ ಅವರ ಮೊಬೈಲ್ಗೆ ಒಟಿಪಿ ಹಾಗೂ ಲಿಂಕ್ ಕಳುಹಿಸಿದ್ದ. ಲಿಂಕ್ ತೆರೆದು ಮಾಹಿತಿ ಭರ್ತಿ ಮಾಡಿ ಯುಪಿಐ ಪಿನ್ ಹಾಕಿ ಸಬ್ಮಿಟ್ ಮಾಡಿದಾಗ ಹಣ ವರ್ಗಾವಣೆಯಾಗಿದೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ: ಕೆವೈಸಿ ಅಪ್ಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆ ಬಂದ್ ಆಗುತ್ತದೆ ಎಂದು ಕೇಶ್ವಾಪುರದ ಟಿ.ಎಂ. ಡಿಸೋಜಾ ಅವರ ಮೊಬೈಲ್ ನಂಬರ್ಗೆ ಮೆಸೆಜ್ ಕಳುಹಿಸಿದ ವ್ಯಕ್ತಿ, ಅವರಿಂದಲೇ ಬ್ಯಾಂಕ್ ಮಾಹಿತಿ ಪಡೆದು ₹49 ಸಾವಿರ ವರ್ಗಾಯಿಸಿಕೊಂಡಿದ್ದಾನೆ.
ಡಿಸೋಜಾ ಅವರು ಮೆಸೆಜ್ ಬಂದ ನಂಬರ್ಗೆ ಕರೆ ಮಾಡಿದಾಗ ಬ್ಯಾಂಕ್ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಖಾತೆ ನಂಬರ್, ಎಟಿಎಂ ಕಾರ್ಡ್ ನಂಬರ್, ಸಿವಿವಿ ನಂಬರ್ ಹಾಗೂ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹61ಸಾವಿರ ವಂಚನೆ: ಆನ್ಲೈನ್ನಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಜನರೇಟ್ ಮಾಡಿಸಿಕೊಡುವುದಾಗಿ ಹೇಳಿ ಧಾರವಾಡದ ಚನ್ನಮ್ಮನಗರದ ನಿವಾಸಿ ಯೋಗೇಶ ಹಿರೇಮಠ ಅವರಿಗೆ ಕರೆ ಮಾಡಿದ ವಂಚಕ, ₹61ಸಾವಿರ ವರ್ಗಾಯಿಸಿಕೊಂಡಿದ್ದಾನೆ.
ಯೋಗೀಶ ಅವರಿಗೆ ಎನಿಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಲು ಹೇಳಿದ ವ್ಯಕ್ತಿ, ಕ್ರೆಡಿಟ್ ಕಾರ್ಡ್ ಮಾಹಿತಿ ಹಾಗೂ ಮೊಬೈಲ್ಗೆ ಬಂದ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.