ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ, ‘ನಾನು, ತವನಪ್ಪ ಅಷ್ಟಗಿ ಹಾಗೂ ದೀಪಕ ಚಿಂಚೋರೆ ಅವರು ರಮ್ಯಾ ರೆಸಿಡೆನ್ಸಿಗೆ ಹೋಗಿದ್ದು ನಿಜ. ದೀಪಾವಳಿ ಹಬ್ಬದ ಹಿನ್ನೆಲೆ ಪೂಜೆಗೆ ಹೋಟೆಲ್ ಮಾಲೀಕರು ಆಹ್ವಾನಿಸಿದ್ದರು. ಪೂಜೆ
ಮುಗಿಸಿಕೊಂಡು, ಎಲ್ಲರೂ ಜತೆಯಲ್ಲಿಯೇ ಊಟ ಮಾಡಿದ್ದೇವೆ. ನಂತರ ಆದ ಘಟನೆಗೂ ನಮಗೂ ಸಂಬಂಧವಿಲ್ಲ. ಒಂದು ವೇಳೆ ಈ ಪ್ರಕರಣದಲ್ಲಿ ನಮ್ಮ ಹೆಸರನ್ನು ಸೇರಿಸಿದರೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ’ ಎಂದರು.