ದೇಶಪಾಂಡೆ ನಗರದಲ್ಲಿ ಗರೀಮಾ ಕಚೇರಿ ಮಾಡಿಕೊಂಡಿದ್ದ ರಾಮಯ್ಯ ಸೇರಿದಂತೆ ನಾಲ್ವರು, 2018ರಲ್ಲಿ ಕಚೇರಿಯನ್ನು ಮುಚ್ಚಿಕೊಂಡು ತಲೆ ಮರೆಸಿಕೊಂಡಿದ್ದರು. ಚನ್ನಬಸಯ್ಯ ಹಿರೇಮಠ ಎಂಬುವರು ನೀಡಿದ ದೂರಿನ ಮೇರೆಗೆ, ನಾಲ್ವರ ವಿರುದ್ಧ ಎಫ್ಐಆರ್ ಆಗಿತ್ತು. ಆರೋಪಿ ಊರಿನಲ್ಲಿರುವ ಮಾಹಿತಿ ಮೇರೆಗೆ, ಬಂಧಿಸಿ ಹುಬ್ಬಳ್ಳಿಗೆ ಕರೆ ತರಲಾಗಿದೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.