ಕಲಘಟಗಿ: ಪುಟ್ಟರಾಜ ಗವಾಯಿಗಳು ಅಂಧ, ,ಅನಾಥರು, ದಿನ–ದಲಿತರಿಗೆ ಸಂಗೀತ ಸೇವೆ ನೀಡಿ ಅವರ ಬಾಳಿಗೆ ಬೆಳಕು ನೀಡಿದವರು ಎಂದು ಪುಟ್ಟರಾಜ ಸೇವಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಕಳಸಣ್ಣವರ ಹೇಳಿದರು.
ಪುಟ್ಟರಾಜ ಸೇವಾ ಸಮಿತಿ ಗದಗ–ಕಲಘಟಗಿ ತಾಲ್ಲೂಕ ಘಟಕದಿಂದ ಪಟ್ಟಣದಲ್ಲಿ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನ್ಮದಿನ ಆಚರಿಸಿ ಮಾತನಾಡಿದರು.
ತಾಲ್ಲೂಕ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಲ್ಲಯ್ಯಸ್ವಾಮಿ ತೋಟಗಂಟಿ ಅಧ್ಯಕ್ಷತೆ ವಹಿಸಿದ್ದರು. ಎಚ್.ಎನ್ ಸುನಗದ, ಮಂಜುಳಾ ನಾಯಕ, ಗಿರೀಶ ಬಂಡಿ, ಮಂಜುನಾಥ ಜಾಯನಗೌಡ, ಶಿವಪುತ್ರಯ್ಯ ತೇಗುರುಮಠ, ಶಿವಪ್ಪ ಧನಿಗೊಂಡ, ಶ್ರೀಮತಿ ಕಳಸನ್ನವರ ಹಾಗೂ ವಿ.ಎಸ್ ನಾಗಲೋಟಿಮಠ ಇದ್ದರು.