<p><strong>ಗುಡಗೇರಿ:</strong> ಹಿಂದೂ ಧರ್ಮವು ಒಂದು ವಿಶಾಲ ಮತ್ತು ವೈವಿಧ್ಯಮಯ ಧರ್ಮವಾಗಿದೆ. ಇದು ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಜೀವನದಲ್ಲಿ ಅರ್ಥವನ್ನು ನೀಡುತ್ತದೆ ಎಂದು ಕುಂದಗೋಳ ಕಲ್ಯಾಣಪುರದ ಶ್ರೀ ಬಸವಣಜ್ಜನ ಹೇಳಿದರು.</p>.<p>ಗ್ರಾಮದ ಹಿಂದೂ ಸಮ್ಮೇಳನಾ ಆಯೋಜನಾ ಸಮಿತಿ ಗ್ರಾಮದ ಮಾಸಣಕೆಮ್ಮ ದೇವಸ್ಥಾನ ಆವರ್ಣದಲ್ಲಿ ಮಂಗಳವಾರ ವಿರಾಟ್ ಹಿಂದೂ ಸಮ್ಮೇಳನ ಶೋಭಾ ಯಾತ್ರೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.</p>.<p>ವಿಶ್ವದ ಅತ್ಯಂತ ಹಳೆಯ ಧರ್ಮಗಳಲ್ಲಿ ಹಿಂದೂ ಧರ್ಮ ಒಂದಾಗಿದೆ. ಹಿಂದೂ ಧರ್ಮವು ವಿವಿಧ ನಂಬಿಕೆಗಳು, ಆಚರಣೆಗಳು ಮತ್ತು ತತ್ವಶಾಸ್ತ್ರಗಳನ್ನು ಒಳಗೊಂಡಿದೆ ನಮ್ಮ ಸಂತರು, ಶರಣರು, ಋಷಿಮುನಿಗಳು ತೋರಿದ ದಾರಿಯಲ್ಲಿ ನಾವೆಲ್ಲ ಸಾಗೋಣ ಎಂದರು.</p>.<p>ಪ್ರಾಂತ ಕಾರ್ಯಕಾರಣಿ ಸದಸ್ಯ ರವೀಂದ್ರಜೀ ಮಾತನಾಡಿ, ವಿಶ್ವದಲ್ಲಿ ದೇಶಕ್ಕೆ ತಾಯಿ ಸ್ವರೂಪ ನೀಡಿದ್ದು ನಮ್ಮ ದೇಶವಾಗಿದೆ. ಭಾರತ ಮಾತಾಕಿ ಜೈ ಎಂದು ಕರೆಯುತ್ತೇವೆ. ಈ ದೇಶದಲ್ಲಿ ಜನಿಸಿದವರು ಎಲ್ಲರೂ ಹಿಂದುಗಳೇ. ಅನ್ಯ ದೇಶದ ಸಂಸ್ಕೃತಿಯನ್ನು ಅನುಕರಣೆ ಮಾಡದೆ. ನಮ್ಮ ಸನಾತನ ಧರ್ಮದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.</p>.<p>ಅತ್ತಿಗೇರಿಯ ಅದ್ವೈತಾನಾಂದ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ (ರಾಜಣಾ) ಪುರದ ವಹಿಸಿದ್ದರು.</p>.<p>ಇದಕ್ಕೂ ಮುನ್ನ ಮಾಸಣಕೆಮ್ಮ ದೇವಸ್ಥಾನದಿಂದ ಶೋಭಾ ಯಾತ್ರೆ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಾರ್ಗದುದ್ದಕ್ಕೂ ಜೈ ಘೋಷಗಳು ಮೊಳಗಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಗೇರಿ:</strong> ಹಿಂದೂ ಧರ್ಮವು ಒಂದು ವಿಶಾಲ ಮತ್ತು ವೈವಿಧ್ಯಮಯ ಧರ್ಮವಾಗಿದೆ. ಇದು ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಜೀವನದಲ್ಲಿ ಅರ್ಥವನ್ನು ನೀಡುತ್ತದೆ ಎಂದು ಕುಂದಗೋಳ ಕಲ್ಯಾಣಪುರದ ಶ್ರೀ ಬಸವಣಜ್ಜನ ಹೇಳಿದರು.</p>.<p>ಗ್ರಾಮದ ಹಿಂದೂ ಸಮ್ಮೇಳನಾ ಆಯೋಜನಾ ಸಮಿತಿ ಗ್ರಾಮದ ಮಾಸಣಕೆಮ್ಮ ದೇವಸ್ಥಾನ ಆವರ್ಣದಲ್ಲಿ ಮಂಗಳವಾರ ವಿರಾಟ್ ಹಿಂದೂ ಸಮ್ಮೇಳನ ಶೋಭಾ ಯಾತ್ರೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.</p>.<p>ವಿಶ್ವದ ಅತ್ಯಂತ ಹಳೆಯ ಧರ್ಮಗಳಲ್ಲಿ ಹಿಂದೂ ಧರ್ಮ ಒಂದಾಗಿದೆ. ಹಿಂದೂ ಧರ್ಮವು ವಿವಿಧ ನಂಬಿಕೆಗಳು, ಆಚರಣೆಗಳು ಮತ್ತು ತತ್ವಶಾಸ್ತ್ರಗಳನ್ನು ಒಳಗೊಂಡಿದೆ ನಮ್ಮ ಸಂತರು, ಶರಣರು, ಋಷಿಮುನಿಗಳು ತೋರಿದ ದಾರಿಯಲ್ಲಿ ನಾವೆಲ್ಲ ಸಾಗೋಣ ಎಂದರು.</p>.<p>ಪ್ರಾಂತ ಕಾರ್ಯಕಾರಣಿ ಸದಸ್ಯ ರವೀಂದ್ರಜೀ ಮಾತನಾಡಿ, ವಿಶ್ವದಲ್ಲಿ ದೇಶಕ್ಕೆ ತಾಯಿ ಸ್ವರೂಪ ನೀಡಿದ್ದು ನಮ್ಮ ದೇಶವಾಗಿದೆ. ಭಾರತ ಮಾತಾಕಿ ಜೈ ಎಂದು ಕರೆಯುತ್ತೇವೆ. ಈ ದೇಶದಲ್ಲಿ ಜನಿಸಿದವರು ಎಲ್ಲರೂ ಹಿಂದುಗಳೇ. ಅನ್ಯ ದೇಶದ ಸಂಸ್ಕೃತಿಯನ್ನು ಅನುಕರಣೆ ಮಾಡದೆ. ನಮ್ಮ ಸನಾತನ ಧರ್ಮದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.</p>.<p>ಅತ್ತಿಗೇರಿಯ ಅದ್ವೈತಾನಾಂದ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ (ರಾಜಣಾ) ಪುರದ ವಹಿಸಿದ್ದರು.</p>.<p>ಇದಕ್ಕೂ ಮುನ್ನ ಮಾಸಣಕೆಮ್ಮ ದೇವಸ್ಥಾನದಿಂದ ಶೋಭಾ ಯಾತ್ರೆ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಾರ್ಗದುದ್ದಕ್ಕೂ ಜೈ ಘೋಷಗಳು ಮೊಳಗಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>