ಟಕ್ಕಳಕಿ ಗ್ರಾಮ ಪಂಚಾಯಿತಿ ಸದಸ್ಯ ಅನಿಲ ದಳವಾಯಿ ಅವರನ್ನು ಕಲ್ಹಳ್ಳಿ ಗುಡ್ಡದಲ್ಲಿ ಶನಿವಾರ ಅಪಹರಿಸಿ ₹1ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅವರ ಸಂಬಂಧಿಕರಿಗೆ ಫೋನ್ ಮಾಡಿ ಹಣ ನೀಡುವಂತೆ ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಸಿಕ್ಕು ಕಾರ್ಯಾಚರಣೆ ನಡೆಸುವ ಹೊತ್ತಿಗೆ, ಗ್ರಾಮದಲ್ಲಿ ಅಪರಿಚಿತರು ಸಂಚರಿಸುವುದನ್ನು ಕಂಡು ಸಂಶಯಗೊಂಡ ಹುನ್ನೂರ ಗ್ರಾಮಸ್ಥರು ಕಾಲುವೆ ಹತ್ತಿರ ಅವರನ್ನು ಹಿಡಿದು ವಿಚಾರಿಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ. ನಂತರ ಅವರನ್ನು ಹಿಡಿದು ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ.