ಈ ಕುರಿತು ಮಾತನಾಡಿದ ಯುವ ಬ್ರಿಗೇಡ್ನ ಸದಸ್ಯ ಚಿದಂಬರ ಶಾಸ್ತ್ರಿ, ‘ಹೊಸಮನೆ ಕಟ್ಟುವಾಗ ಅಥವಾ ಹಾಳಾದ, ಬೇಡವಾದ ಫೋಟೊಗಳನ್ನು ಸಾರ್ವಜನಿಕರು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ರಸ್ತೆ ಬದಿಯಲ್ಲಿ, ಗಟಾರದಲ್ಲಿ, ಹೊಲಸು ಜಾಗದಲ್ಲಿ ಇಟ್ಟು ಹೋಗುತ್ತಾರೆ. ದೇವರೆಂಬ ನಂಬಿಕೆ ಮತ್ತು ಕಲ್ಪನೆಗೆ ಅದು ಘಾಸಿಯಾಗುತ್ತದೆ. ಗೋಕುಲ ರಸ್ತೆ, ಕೇಶ್ವಾಪುರ, ಸಂತೋಷನಗರ, ಉಣಕಲ್, ನವನಗರ ಹೀಗೆ ವಿವಿಧ ಸ್ಥಳಗಳಿಂದ 800ಕ್ಕೂ ಹೆಚ್ಚು ಫೋಟೊಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದ್ದೇವೆ’ ಎಂದರು.