ಅಶೋಕ ನಗರದ ವಾರದ ಸಂತೆಗೆ ಮಳೆಯಿಂದ ತೀವ್ರ ತೊಂದರೆಯಾಯಿತು. ಕಾಯಿಪಲ್ಲೆ, ತರಕಾರಿಗಳು ಮಳೆ ನೀರಿನಲ್ಲಿ ತೇಲಿಹೋದವು. ಇದರಿಂದ ವ್ಯಾಪಾರಸ್ಥರಿಗೆ ನಷ್ಠವಾಯಿತು. ಭಾರಿ ಗಾಳಿಗೆ ಟೆಂಟ್ಗಳು ಹಾರಿಹೋದವು. ಸಂಜೆ ವೇಳೆಗೆ ಸಂತೆಗೆ ತೆರಳಿದ್ದ ಸಾರ್ವಜನಿಕರು ಮಳೆಯಲ್ಲಿ ಸಿಲುಕಿಕೊಂಡರು. ರಾತ್ರಿ ವರೆಗೂ ತುಂತುರು ಹನಿ ಜಿನುಗುತ್ತಿದ್ದ ಕಾರಣ ಹಾಗೂ ಗುಡುಗು, ಸಿಡಿಲಿನ ಆರ್ಭಟದಿಂದಾಗಿ ಕೆಲವರಿಗೆ ಸಂತೆಗೆ ಹೋಗಲು ಸಾಧ್ಯವಾಗಲಿಲ್ಲ.