<p><strong>ಧಾರವಾಡ</strong>: ‘ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಆರನೇ ಘಟಿಕೋತ್ಸವ ಜುಲೈ 19ರಂದು ಜರುಗಲಿದ್ದು, 227 ಮಂದಿ ವಿವಿಧ ಪದವಿ ಪಡೆಯುವರು’ ಎಂದು ಐಐಟಿ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ಆರ್.ದೇಸಾಯಿ ತಿಳಿಸಿದರು.</p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಐಐಟಿಯ ಕೇಂದ್ರೀಯ ವಿದ್ಯಾಗ್ರಹಣ ಸಭಾಗೃಹದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ.ಅಭಯ ಕರಂಡೀಕರ, ಗೋವಾರ ಐಐಟಿ ನಿರ್ದೇಶಕ ಪ್ರೊ.ಧೀರೇಂದ್ರ ಕಟ್ಟಿ ಪಾಲ್ಗೊಳ್ಳುವರು. ಇಬ್ಬರು ಚಿನ್ನದ ಪದಕ, ಏಳು ಮಂದಿ ಬೆಳ್ಳಿ ಪದಕ ಹಾಗೂ ಒಬ್ಬರು ನಗದು ಬಹುಮಾನ ಪಡೆಯುವರು’ ಎಂದರು.</p>.<p>‘ಪ್ರಸ್ತುತ ಧಾರವಾಡ ಐಐಟಿಯಲ್ಲಿ 1,320 ವಿದ್ಯಾರ್ಥಿಗಳು ಇದ್ದಾರೆ. ಈ ವರ್ಷ ಕೆಲ ಹೊಸ ಆರಂಭಿಸಲಾಗಿದೆ. ಎಂ.ಎಸ್ಸಿ (ಎಕಾನಾಮಿಕ್ಸ್) ಆರಂಭಿಸಲು ಉದ್ದೇಶಿಸಲಾಗಿದೆ. ‘ಫೇಸ್:1 ಬಿ’ನಡಿ ₹ 2,200 ಕೋಟಿ ಅನುದಾನ ಮಂಜೂರಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯಲಿವೆ’ ಎಂದು ತಿಳಿಸಿದರು.</p>.<p>ಬೆಳೆ ನಿರ್ವಹಣೆ ಮತ್ತು ಇಳುವರಿ ಸುಧಾರಣೆಗೆ ತಂತ್ರಜ್ಞಾನ ನೆರವು, ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಅನ್ವಯಿಕತೆಗೆ ಸಂಬಂಧಿಸಿದಂತೆ ಐಐಟಿಯಲ್ಲಿ ಅಧ್ಯಯನಗಳು ನಡೆಯುತ್ತಿವೆ. ಪರಿಸರ ಸ್ನೇಹಿ ತಂತ್ರಜ್ಞಾನಗಳ (ಸೌರಶಕ್ತಿ, ಪವನ ಶಕ್ತಿ, ಮಳೆ ನೀರು ಸಂಗ್ರಹ...) ಅಳವಡಿಕೆ ಕುರಿತು ಸ್ಥಳೀಯವಾಗಿ ಮಾಹಿತಿ ನೀಡಲಾಗುತ್ತಿದೆ ಎಂದರು. </p>.<p>ಐಐಟಿಯ ಕುಲಸಚಿವ ಕಲ್ಯಾಣ ಕುಮಾರ ಭಟ್ಟಚಾರ್ಯ, ಪ್ರೊ.ಧೀರಜ್ ವಿ.ಪಾಟೀಲ್, ಪ್ರೊ.ಅಮರನಾಥ ಹೆಗಡೆ, ಪ್ರೊ.ಎನ್.ಎಸ್.ಪುಣೆಕರ್, ಪ್ರೊ. ಪ್ರತ್ಯಾಸಾ ಭುವಿ, ದೀಲಿಪ ಎ.ಡಿ., ಪ್ರೊ.ಸಿ.ರವಿಕುಮಾರ, ಸೂರ್ಯ ಪ್ರತಾಪ ಸಿಂಗ್, ಜಯಕುಮಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ‘ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಆರನೇ ಘಟಿಕೋತ್ಸವ ಜುಲೈ 19ರಂದು ಜರುಗಲಿದ್ದು, 227 ಮಂದಿ ವಿವಿಧ ಪದವಿ ಪಡೆಯುವರು’ ಎಂದು ಐಐಟಿ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ಆರ್.ದೇಸಾಯಿ ತಿಳಿಸಿದರು.</p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಐಐಟಿಯ ಕೇಂದ್ರೀಯ ವಿದ್ಯಾಗ್ರಹಣ ಸಭಾಗೃಹದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ.ಅಭಯ ಕರಂಡೀಕರ, ಗೋವಾರ ಐಐಟಿ ನಿರ್ದೇಶಕ ಪ್ರೊ.ಧೀರೇಂದ್ರ ಕಟ್ಟಿ ಪಾಲ್ಗೊಳ್ಳುವರು. ಇಬ್ಬರು ಚಿನ್ನದ ಪದಕ, ಏಳು ಮಂದಿ ಬೆಳ್ಳಿ ಪದಕ ಹಾಗೂ ಒಬ್ಬರು ನಗದು ಬಹುಮಾನ ಪಡೆಯುವರು’ ಎಂದರು.</p>.<p>‘ಪ್ರಸ್ತುತ ಧಾರವಾಡ ಐಐಟಿಯಲ್ಲಿ 1,320 ವಿದ್ಯಾರ್ಥಿಗಳು ಇದ್ದಾರೆ. ಈ ವರ್ಷ ಕೆಲ ಹೊಸ ಆರಂಭಿಸಲಾಗಿದೆ. ಎಂ.ಎಸ್ಸಿ (ಎಕಾನಾಮಿಕ್ಸ್) ಆರಂಭಿಸಲು ಉದ್ದೇಶಿಸಲಾಗಿದೆ. ‘ಫೇಸ್:1 ಬಿ’ನಡಿ ₹ 2,200 ಕೋಟಿ ಅನುದಾನ ಮಂಜೂರಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯಲಿವೆ’ ಎಂದು ತಿಳಿಸಿದರು.</p>.<p>ಬೆಳೆ ನಿರ್ವಹಣೆ ಮತ್ತು ಇಳುವರಿ ಸುಧಾರಣೆಗೆ ತಂತ್ರಜ್ಞಾನ ನೆರವು, ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಅನ್ವಯಿಕತೆಗೆ ಸಂಬಂಧಿಸಿದಂತೆ ಐಐಟಿಯಲ್ಲಿ ಅಧ್ಯಯನಗಳು ನಡೆಯುತ್ತಿವೆ. ಪರಿಸರ ಸ್ನೇಹಿ ತಂತ್ರಜ್ಞಾನಗಳ (ಸೌರಶಕ್ತಿ, ಪವನ ಶಕ್ತಿ, ಮಳೆ ನೀರು ಸಂಗ್ರಹ...) ಅಳವಡಿಕೆ ಕುರಿತು ಸ್ಥಳೀಯವಾಗಿ ಮಾಹಿತಿ ನೀಡಲಾಗುತ್ತಿದೆ ಎಂದರು. </p>.<p>ಐಐಟಿಯ ಕುಲಸಚಿವ ಕಲ್ಯಾಣ ಕುಮಾರ ಭಟ್ಟಚಾರ್ಯ, ಪ್ರೊ.ಧೀರಜ್ ವಿ.ಪಾಟೀಲ್, ಪ್ರೊ.ಅಮರನಾಥ ಹೆಗಡೆ, ಪ್ರೊ.ಎನ್.ಎಸ್.ಪುಣೆಕರ್, ಪ್ರೊ. ಪ್ರತ್ಯಾಸಾ ಭುವಿ, ದೀಲಿಪ ಎ.ಡಿ., ಪ್ರೊ.ಸಿ.ರವಿಕುಮಾರ, ಸೂರ್ಯ ಪ್ರತಾಪ ಸಿಂಗ್, ಜಯಕುಮಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>