<p><strong>ಅಣ್ಣಿಗೇರಿ</strong>: ‘ನೆಲ, ಜಲ, ಭಾಷೆಯ ಉಳಿವಿಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ’ ಎಂದು ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೌಜಲಗಿ ಹೇಳಿದರು.</p>.<p>ಆದಿಕವಿ ಪಂಪನ ಜನ್ಮಸ್ಥಳವಾದ ಇಲ್ಲಿನ ದೇಶಪಾಂಡೆ ವಾಡೆಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ದತ್ತಿನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.</p>.<p>ಸಾಹಿತಿ ಮಂಜುನಾಥ ತಿಗಡಿ ಅವರ ‘ಕಾವ್ಯ ಲಹರಿ’ ಕವನ ಸಂಕಲನವನ್ನು ಪ್ರೊ.ಎಸ್.ಎಸ್.ಹರ್ಲಾಪೂರ ಬಿಡುಗಡೆ ಮಾಡಿ ಮಾತನಾಡಿ, ಮಂಜುನಾಥ ಅವರು ಅನುಭವಿಸಿದ ನೋವು, ಕಷ್ಟಗಳನ್ನು ಕವನಗಳ ಮೂಲಕ ಅಭಿವ್ಯಕ್ತಿಸಿದ್ದಾರೆ ಎಂದು ಹೇಳಿದರು.</p>.<p>ಇದೇ ಸಂದರ್ಭದಲ್ಲಿ ದೇವರಾಜ ನಾವಳ್ಳಿ ಅವರಿಗೆ ‘ಸಾವಯವ ಕೃಷಿ ಋಷಿ ಪ್ರಶಸ್ತಿ’, ಪ್ರಶಾಂತ ಹಂದಿಗೋಳ ಅವರಿಗೆ ‘ಕವಿ ಚಕ್ರವರ್ತಿ ರನ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಸದಸ್ಯ ಶರಣಬಸಪ್ಪ ಯತ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.</p>.<p>ಮಹಮ್ಮದ್ ರಫೀಕ್ ಮುಳಗುಂದ, ಶಾಂತಾ ಲಕ್ಷ್ಮೇಶ್ವರ, ಡಿ.ಆರ್.ಕಬ್ಬೂರ, ಪ್ರಶಾಂತ ಹಂದಿಗೋಳ ಅವರಿಂದ ಗೀತ ಗಾಯನ ನಡೆಯಿತು.</p>.<p>ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ತಾಲ್ಲೂಕು ಕಸಾಪ ಅಧ್ಯಕ್ಷ ಅನ್ವರಭಾಷಾ ಹುಬ್ಬಳ್ಳಿ, ಸಾಹಿತಿ ಅಮೃತೇಶ ತಂಡರ, ಎಂ.ಎಸ್.ಪೂಜಾರ, ಮಂಜುನಾಥ ತಿಗಡಿ, ಜಿ.ವೈ.ಕೊರವರ, ಲಲಿತಾ ಸಾಲಿಮಠ, ಚಂದ್ರಕಾಂತ ವೇರ್ಣೆಕರ, ಅರುಣಕುಮಾರ ಹೂಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಣ್ಣಿಗೇರಿ</strong>: ‘ನೆಲ, ಜಲ, ಭಾಷೆಯ ಉಳಿವಿಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ’ ಎಂದು ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೌಜಲಗಿ ಹೇಳಿದರು.</p>.<p>ಆದಿಕವಿ ಪಂಪನ ಜನ್ಮಸ್ಥಳವಾದ ಇಲ್ಲಿನ ದೇಶಪಾಂಡೆ ವಾಡೆಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ದತ್ತಿನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.</p>.<p>ಸಾಹಿತಿ ಮಂಜುನಾಥ ತಿಗಡಿ ಅವರ ‘ಕಾವ್ಯ ಲಹರಿ’ ಕವನ ಸಂಕಲನವನ್ನು ಪ್ರೊ.ಎಸ್.ಎಸ್.ಹರ್ಲಾಪೂರ ಬಿಡುಗಡೆ ಮಾಡಿ ಮಾತನಾಡಿ, ಮಂಜುನಾಥ ಅವರು ಅನುಭವಿಸಿದ ನೋವು, ಕಷ್ಟಗಳನ್ನು ಕವನಗಳ ಮೂಲಕ ಅಭಿವ್ಯಕ್ತಿಸಿದ್ದಾರೆ ಎಂದು ಹೇಳಿದರು.</p>.<p>ಇದೇ ಸಂದರ್ಭದಲ್ಲಿ ದೇವರಾಜ ನಾವಳ್ಳಿ ಅವರಿಗೆ ‘ಸಾವಯವ ಕೃಷಿ ಋಷಿ ಪ್ರಶಸ್ತಿ’, ಪ್ರಶಾಂತ ಹಂದಿಗೋಳ ಅವರಿಗೆ ‘ಕವಿ ಚಕ್ರವರ್ತಿ ರನ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಸದಸ್ಯ ಶರಣಬಸಪ್ಪ ಯತ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.</p>.<p>ಮಹಮ್ಮದ್ ರಫೀಕ್ ಮುಳಗುಂದ, ಶಾಂತಾ ಲಕ್ಷ್ಮೇಶ್ವರ, ಡಿ.ಆರ್.ಕಬ್ಬೂರ, ಪ್ರಶಾಂತ ಹಂದಿಗೋಳ ಅವರಿಂದ ಗೀತ ಗಾಯನ ನಡೆಯಿತು.</p>.<p>ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ತಾಲ್ಲೂಕು ಕಸಾಪ ಅಧ್ಯಕ್ಷ ಅನ್ವರಭಾಷಾ ಹುಬ್ಬಳ್ಳಿ, ಸಾಹಿತಿ ಅಮೃತೇಶ ತಂಡರ, ಎಂ.ಎಸ್.ಪೂಜಾರ, ಮಂಜುನಾಥ ತಿಗಡಿ, ಜಿ.ವೈ.ಕೊರವರ, ಲಲಿತಾ ಸಾಲಿಮಠ, ಚಂದ್ರಕಾಂತ ವೇರ್ಣೆಕರ, ಅರುಣಕುಮಾರ ಹೂಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>