ಗಜಾನನ ಮಹಾ ಮಂಡಳದ ನೇತೃತ್ವದಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಎಸ್ಜೆಎಂವಿಎಸ್ ಕಾಲೇಜು ಲ್ಯಾಮಿಂಗ್ಟನ್ ಶಾಲೆಯ ಮಕ್ಕಳ ಪಾಲ್ಗೊಂಡಿದ್ದರು. ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಕೊಪ್ಪದ್ ಮಾತನಾಡಿ, ಮಳೆ– ಗಾಳಿ ಎಂದು ಯೋಚಿಸದೆ ಪ್ರಾಣ ಪಣಕ್ಕಿಟ್ಟು ದೇಶದ ಗಡಿ ಕಾಯುವ ಸೈನಿಕರ ಸ್ಫೂರ್ತಿಯನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡಬೇಕು. ಯುವಕರು ಸಹ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಸೇನೆ ಸೇರಲು ಮನಸ್ಸು ಮಾಡಬೇಕು ಎಂದು ಹೇಳಿದರು.