ಶಿವಶಂಕರ ಶೇ 10ರಷ್ಟು ಬಡ್ಡಿ ದರದಲ್ಲಿ ₹5 ಲಕ್ಷ ಸಾಲ ಪಡೆದಿದ್ದರು. ನಿಗದಿತ ಸಮಯಕ್ಕೆ ಸಾಲ ಮರುಪಾವತಿಸದ ಕಾರಣ ಸಿದ್ದೇಶ್ವರ, ಅದರಗುಂಚಿಯ ಶಿವಶಂಕರ ಅವರ ಮನೆಗೆ ಬೀಗ ಹಾಕಿ ಅಪಹರಿಸಿಕೊಂಡು ಬಂದು ಹಳೇ ಹುಬ್ಬಳ್ಳಿಯ ಬೃಂದಾವನ ಲಾಡ್ಜ್ನಲ್ಲಿ ನಾಲ್ಕು ದಿನ ಬಂಧನದಲ್ಲಿಟ್ಟಿದ್ದ. ಶಿವಶಂಕರ ಅವರಿಂದ ಸಿದ್ದೇಶ್ವರ ಒತ್ತಾಯಪೂರ್ವಕವಾಗಿ ಒಂದು ಸ್ಯಾಂಟ್ರೊ ಮತ್ತು ನ್ಯಾನೊ ಕಾರು ಕಸಿದುಕೊಂಡು ಮಾರಾಟ ಮಾಡಿದ್ದ. ಮಾರಾಟದಿಂದ ಬಂದ ಹಣವನ್ನೂ ತಾನೇ ಇಟ್ಟುಕೊಂಡಿದ್ದ.ಮನೆಯ ಮೂಲಕಾಗದ ಪತ್ರಗಳನ್ನು, ಎಂಟು ಚೆಕ್ಗಳನ್ನು ಕೂಡ ಪಡೆದುಕೊಂಡಿದ್ದ. ಶಿವಶಂಕರ, ಹೋಟೆಲ್ ಬಂಧನದಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬಯಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.