ಹುಬ್ಬಳ್ಳಿಯ ಕುಸಗಲ್ ರಸ್ತೆಯ ಮೈದಾನದಲ್ಲಿ ವಿವಿಧ ಮಾದರಿಯ ಗಾಳಿಪಟಗಳು ಗಮಸೆಳೆದವು
ಬದುಕಿನ ಜಂಜಾಟದಿಂದ ತುಸು ಬಿಡುಗಡೆ ಪಡೆಯಲು ದೇಸಿ ಕ್ರೀಡೆಗಳು ಸಹಕಾರಿ. ಈ ಹಿಂದೆ ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಈಗಿನ ಮಕ್ಕಳಿಗೆ ಓದಲಷ್ಟೇ ಹೇಳುತ್ತಾರೆ
ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸಭಾಪತಿ
ಪತಿಯೊಂದಿಗೆ ಗಾಳಿಪಟ ಉತ್ಸವದಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿರುವೆ. ಗಾಳಿ ಉತ್ತಮವಾಗಿದ್ದು ಗಾಳಿಪಟ ಹಾರಿಸಲು ಪೂರಕ ವಾತಾವರಣವಿದೆ
ಜಾಗೃತಿ ಜೋಶಿ ಗುಜರಾತ್
ಚೈನಾ ಮಲೇಷಿಯಾ ಥೈಲ್ಯಾಂಡ್ಗಳಲ್ಲಿ ನಡೆದ ಗಾಳಿಪಟ ಹಾರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಇಲ್ಲಿಗೆ ಐದನೇ ಬಾರಿ ಬಂದಿರುವೆ
ಅಮನ್ ಕುಮಾರ್ ಸಾಹು ಒಡಿಶಾ
‘ಗಾಳಿಪಟ ಸಂಸ್ಕೃತಿಯ ಭಾಗ’
‘ಗಾಳಿಪಟ ಹಾರಿಸುವುದು ಭಾರತೀಯ ಸಂಸ್ಕೃತಿಯ ಭಾಗ. ಇತ್ತೀಚಿನ ದಿನಗಳಲ್ಲಿ ಮರೆತುಹೋಗಿದ್ದ ಈ ದೇಸಿ ಕ್ರೀಡೆಗೆ ಪುನಶ್ಚೇತನ ನೀಡಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಎರಡು ದಿನಗಳ ಈ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿದೆ’ ಎಂದರು. ಶಾಸಕರಾದ ಮಹೇಶ ಟೆಂಗಿನಕಾಯಿ ಅರವಿಂದ ಬೆಲ್ಲದ ಎಂ.ಆರ್. ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ ಇದ್ದರು.