<p>ಎಚ್ಐವಿ ಸಂಪೂರ್ಣವಾಗಿ ಗುಣಪಡಿಸಲಾಗದ ಸೋಂಕು. ಈ ಕುರಿತ ಜಾಗೃತಿಗೆ ಇಂದಿಗೆ 30ನೇ ವರ್ಷವಾದರೂ ಜನರಿಗೆ ಎಚ್ಐವಿ/ ಏಡ್ಸ್ ಅಂದರೆ ಒಂದು ಕೆಟ್ಟ ಭಾವನೆ. ಎಚ್ಐವಿ ಇದ್ದಂತಹ ರೋಗಿಗಳ ಬಗ್ಗೆ ತಾರತಮ್ಯ ಮಾಡುವುದು ಮಾತ್ರ ಹೊಗಿಲ್ಲ. ಇದರಿಂದ ಎಷ್ಟೋ ಸಾರಿ ಸಮಾಜಕ್ಕೆ ಹೆದರಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಇನ್ನು ಮಾಡಿಸಿಕೊಂಡರೂ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಈ ಸಲದ ಘೋಷಣೆ ‘ಎಲ್ಲರೂ ನಿಮ್ಮ ಸ್ಥಿತಿಯನ್ನು ಅರಿತುಕೊಳ್ಳಿ’ ಅಂದರೆ ಎಲ್ಲರಿಗೂ ಅವರ ಬಗ್ಗೆ ತಿಳಿದುಕೊಳ್ಳಲು ಹುರಿದುಂಬಿಸುವುದು.</p>.<p>2020ರ ವರೆಗೆ ನಮ್ಮ ಗುರಿ ಅಂದರೆ ಶೇ 90ರಷ್ಟು ಎಚ್ಐವಿ ಸೋಂಕಿರುವವರು ತಮ್ಮ ಎಚ್.ಐ.ವಿ. ಸ್ಥಿತಿಯನ್ನು ತಿಳಿದಿರಬೇಕು.</p>.<p>ಶೇ 90ರಷ್ಟು ಎಚ್.ಐ.ವಿ ಸೋಂಕಿತರು ಎ.ಆರ್.ಟಿ ಚಿಕಿತ್ಸೆಯನ್ನು ಪಡೆದಿರಬೇಕು. ಎ.ಆರ್.ಟಿ ಪಡೆಯುತ್ತಿರು<br />ವವರು ತಮ್ಮ ವೈರಲ್ ಲೋಡ್ ಪ್ರಮಾಣ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಯಲ್ಲಿ ಐ.ಸಿ.ಟಿ,ಸಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಬಂದಂತಹ ಅಭ್ಯರ್ಥಿಗಳಿಗೆ ಆಪ್ತಸಮಾಲೊಚಕರು ಎಚ್.ಐ.ವಿ ಬಗ್ಗೆ ಸಮಗ್ರ ಮಾಹಿತಿ ನೀಡಿ, ರಕ್ತತಪಾಸಣೆ ಮಾಡುತ್ತಾರೆ. ವರದಿಯನ್ನು ಗುಪ್ತವಾಗಿ ಇಡಲಾಗುತ್ತದೆ.</p>.<p>ಇನ್ನು ಗರ್ಭಿಣಿಯರು ತಪ್ಪದೆ ಮೂರು ತಿಂಗಳು ಇರುವಾಗಲೆ ತಪ್ಪದೆ ಎಚ್.ಐ.ವಿ ಪರೀಕ್ಷೆ ಮಾಡಿಸಿಕೊಳಬೇಕು. ಅವರಿಗೆ ಏನಾದರೂ ಸೋಂಕು ತಗುಲಿದ್ದರೆ ಮಗುವಿಗೆ ಎಚ್.ಐ.ವಿ ಬಾರದ ಹಾಗೆ ಔಷಧಿಯನ್ನು ನೀಡಿ ಮಗುವನ್ನು ಅದರಿಂದ ಕಾಪಾಡಬಹುದು. ತಾಯಿಗೂ ಸಹ ಎ.ಆರ್.ಟಿ ಮಾತ್ರೆಯನ್ನು ಆರಂಭ ಮಾಡಬೇಕು.</p>.<p>ಸೋಂಕಿತ ತಾಯಿಯು ಮಗುವಿಗೆ ಎದೆ ಹಾಲು ನೀಡಬಹುದು. ಎದೆ ಹಾಲು ಅತ್ಯಂತ ಸೂಕ್ತವಾದ ಆಹಾರ. ಆದರೆ ಉಸ್ತುವಾರಿಗೆ ತಾಯಿಯು ಐ.ಸಿ.ಟಿ,ಸಿ ಕೇಂದ್ರದೊಂದಿಗೆ ನಿಯಮಿತ ಸಂಪರ್ಕ ಹೊಂದಿರಬೇಕು. ಸರಿಯಾಗಿ ಎ.ಆರ್.ಟಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರ ಕೊಡಬೇಕು.</p>.<p>ಮಗುವಿನ ರಕ್ತ ತಪಾಸಣೆಯನ್ನು 6 ವಾರ, 6 ತಿಂಗಳು, 12 ತಿಂಗಳು, 18 ತಿಂಗಳಲ್ಲಿ ಐ.ಸಿ.ಟಿ,ಸಿ ಕೇಂದ್ರದಲ್ಲಿ ಮಾಡಿಸಬೇಕು. ಇದರಿಂದ ಮಗುವಿಗೆ ತೊಂದರೆ ಬರುವುದಿಲ್ಲ. ಬಹಳ ಜನಕ್ಕೆ ತಾಯಿಯಿಂದ ಮಕ್ಕಳಿಗೆ ಬಂದರೆ ಮಗು ಬದುಕುವುದಿಲ್ಲ ಅನ್ನುವ ಭಾವನೆ ಇದೆ. ಇದು ಸರಿಯಲ್ಲ.</p>.<p>‘ಎಲ್ಲರ ಎಚ್ಐವಿ ಸ್ಥಿತಿ ಅರಿತುಕೊಳ್ಳಿ’ ಘೋಷಣೆಯಡಿ ವಿವಿಧೆಡೆಯಂತೆ ಜೈಲಿಗೆ ಹೊಗಿ ಕೈದಿಗಳ ರಕ್ತ ತಪಾಸಣೆಯನ್ನು ‘ಸಾಥಿ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪಡೆದು, ಅವರ ಸಮ್ಮುಖದಲ್ಲಿಯೇ ನಮ್ಮ ಆಪ್ತ ಸಮಾಲೋಚಕರು ಮತ್ತು ಪ್ರಯೋಗಶಾಲೆ ತಂತ್ರಜ್ಞರ ಒಟ್ಟಿಗೆ ಮಾಡಲಾಯಿತು.</p>.<p>ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 577 ಕೈದಿಗಳನ್ನು ತಪಾಸಣೆ ಮಾಡಲಾಯಿತು. ಅವರಲ್ಲಿ ಎಚ್ಐವಿ ಸೋಂಕು ತಗುಲಿರುವ ಒಬ್ಬ ಕೈದಿ ಪತ್ತೆಯಾಗಿದ್ದು ಎ.ಆರ್.ಟಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಚ್ಐವಿ ಸಂಪೂರ್ಣವಾಗಿ ಗುಣಪಡಿಸಲಾಗದ ಸೋಂಕು. ಈ ಕುರಿತ ಜಾಗೃತಿಗೆ ಇಂದಿಗೆ 30ನೇ ವರ್ಷವಾದರೂ ಜನರಿಗೆ ಎಚ್ಐವಿ/ ಏಡ್ಸ್ ಅಂದರೆ ಒಂದು ಕೆಟ್ಟ ಭಾವನೆ. ಎಚ್ಐವಿ ಇದ್ದಂತಹ ರೋಗಿಗಳ ಬಗ್ಗೆ ತಾರತಮ್ಯ ಮಾಡುವುದು ಮಾತ್ರ ಹೊಗಿಲ್ಲ. ಇದರಿಂದ ಎಷ್ಟೋ ಸಾರಿ ಸಮಾಜಕ್ಕೆ ಹೆದರಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಇನ್ನು ಮಾಡಿಸಿಕೊಂಡರೂ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಈ ಸಲದ ಘೋಷಣೆ ‘ಎಲ್ಲರೂ ನಿಮ್ಮ ಸ್ಥಿತಿಯನ್ನು ಅರಿತುಕೊಳ್ಳಿ’ ಅಂದರೆ ಎಲ್ಲರಿಗೂ ಅವರ ಬಗ್ಗೆ ತಿಳಿದುಕೊಳ್ಳಲು ಹುರಿದುಂಬಿಸುವುದು.</p>.<p>2020ರ ವರೆಗೆ ನಮ್ಮ ಗುರಿ ಅಂದರೆ ಶೇ 90ರಷ್ಟು ಎಚ್ಐವಿ ಸೋಂಕಿರುವವರು ತಮ್ಮ ಎಚ್.ಐ.ವಿ. ಸ್ಥಿತಿಯನ್ನು ತಿಳಿದಿರಬೇಕು.</p>.<p>ಶೇ 90ರಷ್ಟು ಎಚ್.ಐ.ವಿ ಸೋಂಕಿತರು ಎ.ಆರ್.ಟಿ ಚಿಕಿತ್ಸೆಯನ್ನು ಪಡೆದಿರಬೇಕು. ಎ.ಆರ್.ಟಿ ಪಡೆಯುತ್ತಿರು<br />ವವರು ತಮ್ಮ ವೈರಲ್ ಲೋಡ್ ಪ್ರಮಾಣ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಯಲ್ಲಿ ಐ.ಸಿ.ಟಿ,ಸಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಬಂದಂತಹ ಅಭ್ಯರ್ಥಿಗಳಿಗೆ ಆಪ್ತಸಮಾಲೊಚಕರು ಎಚ್.ಐ.ವಿ ಬಗ್ಗೆ ಸಮಗ್ರ ಮಾಹಿತಿ ನೀಡಿ, ರಕ್ತತಪಾಸಣೆ ಮಾಡುತ್ತಾರೆ. ವರದಿಯನ್ನು ಗುಪ್ತವಾಗಿ ಇಡಲಾಗುತ್ತದೆ.</p>.<p>ಇನ್ನು ಗರ್ಭಿಣಿಯರು ತಪ್ಪದೆ ಮೂರು ತಿಂಗಳು ಇರುವಾಗಲೆ ತಪ್ಪದೆ ಎಚ್.ಐ.ವಿ ಪರೀಕ್ಷೆ ಮಾಡಿಸಿಕೊಳಬೇಕು. ಅವರಿಗೆ ಏನಾದರೂ ಸೋಂಕು ತಗುಲಿದ್ದರೆ ಮಗುವಿಗೆ ಎಚ್.ಐ.ವಿ ಬಾರದ ಹಾಗೆ ಔಷಧಿಯನ್ನು ನೀಡಿ ಮಗುವನ್ನು ಅದರಿಂದ ಕಾಪಾಡಬಹುದು. ತಾಯಿಗೂ ಸಹ ಎ.ಆರ್.ಟಿ ಮಾತ್ರೆಯನ್ನು ಆರಂಭ ಮಾಡಬೇಕು.</p>.<p>ಸೋಂಕಿತ ತಾಯಿಯು ಮಗುವಿಗೆ ಎದೆ ಹಾಲು ನೀಡಬಹುದು. ಎದೆ ಹಾಲು ಅತ್ಯಂತ ಸೂಕ್ತವಾದ ಆಹಾರ. ಆದರೆ ಉಸ್ತುವಾರಿಗೆ ತಾಯಿಯು ಐ.ಸಿ.ಟಿ,ಸಿ ಕೇಂದ್ರದೊಂದಿಗೆ ನಿಯಮಿತ ಸಂಪರ್ಕ ಹೊಂದಿರಬೇಕು. ಸರಿಯಾಗಿ ಎ.ಆರ್.ಟಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರ ಕೊಡಬೇಕು.</p>.<p>ಮಗುವಿನ ರಕ್ತ ತಪಾಸಣೆಯನ್ನು 6 ವಾರ, 6 ತಿಂಗಳು, 12 ತಿಂಗಳು, 18 ತಿಂಗಳಲ್ಲಿ ಐ.ಸಿ.ಟಿ,ಸಿ ಕೇಂದ್ರದಲ್ಲಿ ಮಾಡಿಸಬೇಕು. ಇದರಿಂದ ಮಗುವಿಗೆ ತೊಂದರೆ ಬರುವುದಿಲ್ಲ. ಬಹಳ ಜನಕ್ಕೆ ತಾಯಿಯಿಂದ ಮಕ್ಕಳಿಗೆ ಬಂದರೆ ಮಗು ಬದುಕುವುದಿಲ್ಲ ಅನ್ನುವ ಭಾವನೆ ಇದೆ. ಇದು ಸರಿಯಲ್ಲ.</p>.<p>‘ಎಲ್ಲರ ಎಚ್ಐವಿ ಸ್ಥಿತಿ ಅರಿತುಕೊಳ್ಳಿ’ ಘೋಷಣೆಯಡಿ ವಿವಿಧೆಡೆಯಂತೆ ಜೈಲಿಗೆ ಹೊಗಿ ಕೈದಿಗಳ ರಕ್ತ ತಪಾಸಣೆಯನ್ನು ‘ಸಾಥಿ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪಡೆದು, ಅವರ ಸಮ್ಮುಖದಲ್ಲಿಯೇ ನಮ್ಮ ಆಪ್ತ ಸಮಾಲೋಚಕರು ಮತ್ತು ಪ್ರಯೋಗಶಾಲೆ ತಂತ್ರಜ್ಞರ ಒಟ್ಟಿಗೆ ಮಾಡಲಾಯಿತು.</p>.<p>ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 577 ಕೈದಿಗಳನ್ನು ತಪಾಸಣೆ ಮಾಡಲಾಯಿತು. ಅವರಲ್ಲಿ ಎಚ್ಐವಿ ಸೋಂಕು ತಗುಲಿರುವ ಒಬ್ಬ ಕೈದಿ ಪತ್ತೆಯಾಗಿದ್ದು ಎ.ಆರ್.ಟಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>