<p><strong>ಅಳ್ನಾವರ</strong>: ಮಿಂಚಿನ ಪ್ರದರ್ಶನ ತೋರಿದ ಕುಮಟಾದ ಶಾಂತಿಕಾಂಬಾ ತಂಡವು ಇಲ್ಲಿ ಅಳ್ನಾವರ ವಾರಿಯರ್ಸ್ ಕ್ರೀಡಾ ಪ್ರೇಮಿಗಳು ಹಮ್ಮಿಕೊಂಡ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯಲ್ಲಿ ಅನಾಯಾಸವಾಗಿ ಪ್ರಶಸ್ತಿ ಗೆದ್ದಿತು.</p>.<p>ಗ್ರಾಮದೇವಿ ಜಾತ್ರಾ ಸ್ಥಳದಲ್ಲಿ ನಡೆದ ಈ ಟೂರ್ನಿಯನ್ನು ಮಾಜಿ ಸಚಿವ ಸಂತೋಷ್ ಲಾಡ್ ಪ್ರಾಯೋಜಿಸಿದ್ದರು. ಟೂರ್ನಿ ಫೈನಲ್ ಪಂದ್ಯದಲ್ಲಿ ಕುಮಟಾ ತಂಡವು ಎರಡು ನೇರ ಸೆಟ್ಗಳಿಂದ ಧಾರವಾಡದ ಸಾಯಿ ತಂಡವನ್ನು ಸುಲಭವಾಗಿ ಮಣಿಸಿತು. ಉತ್ತಮ ಆಟವಾಡಿದ ದಾಂಡೇಲಿ ತಂಡ ತೃತೀಯ ಸ್ಥಾನಗಳಿಸಿತು.</p>.<p>ಕುಮಟಾ ತಂಡದ ನವೀನ್ ಅವರಿಗೆ ಉತ್ತಮ ಹೊಡೆತಗಾರ, ಚಿನ್ನ ಅವರಿಗೆ ಉತ್ತಮ ಎಸೆತಗಾರ ಹಾಗೂ ಧಾರವಾಡದ ಸಾಯಿ ತಂಡದ ವಿಕಾಸ ಅವರಿಗೆ ‘ಬೆಸ್ಟ್ ಆಲ್ರೌಂಡರ್’ ಬಹುಮಾನ ನೀಡಲಾಯಿತು.</p>.<p>ಸುಂದರ ಸಂಜೆಯಲ್ಲಿ ಟೂರ್ನಿ ಉದ್ಘಾಟಿಸಿ ಮಾತನಾಡಿದ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ‘ಸಂತೋಷ್ ಲಾಡ್ ಅವರು ಕ್ರೀಡೆಗಳಿಗೆ ಸದಾ ಉತ್ತೇಜನ ನೀಡುತ್ತ ಬಂದಿದ್ದಾರೆ. ಕ್ರೀಡಾಪಟುಗಳನ್ನು ಬೆಳೆಸಬೇಕು, ಅವರನ್ನು ಪ್ರೋತ್ಸಾಹಿಸಬೇಕು ಎಂಬುದು ಅವರ ಹಂಬಲ’ ಎಂದರು.</p>.<p>‘ಪ್ರಸ್ತುತ ಒತ್ತಡದ ಜೀವನ ಶೈಲಿಯಿಂದ ಹೊರಬರಲು ಕ್ರೀಡೆಯಲ್ಲಿ ತೊಡಗಬೇಕು. ಈ ಮೂಲಕ ಆರೋಗ್ಯಯುತ ಸಮಾಜ ಕಟ್ಟಬೇಕು’ ಎಂದರು.</p>.<p>ಹಿರಿಯರಾದ ಹಸನಅಲಿ ಶೇಖ, ಶಾಂತಿಲಾಲ್ ಪಟೇಲ, ರಸೀದ್ ಬಾಗೇವಾಡಿ, ಬಸವರಾಜ ಕಡಕೋಳ, ರಾಯಪ್ಪ ಹುಡೇದ, ಸತ್ತಾರ ಬಾತಖಂಡಿ, ಜಾವೀದ್ ಕಿತ್ತೂರ, ಯುನೂಸ್ ಬಾಗವಾನ್, ರಮೇಶ ಕುನ್ನೂರಕರ, ಜೈಲಾನಿ ಸುದರ್ಜಿ, ಸುನಿಲ ರಾಠೋಡ್, ನಾಗರಾಜ ಹಾಲವರ, ನಿಸಾರ್ ಖತೀಬ್ ಇದ್ದರು.</p>.<p>ನಿರ್ಣಾಯಕರಾಗಿ ಪುಂಡಲಿಕ ಪಾರ್ದಿ, ಸುನಿಲ್ ಸಾಗರೇಕರ, ಮಹಾಂತೇಶ ಬೆಳಗಾವಿ, ಆನಂದ ಪಾಟೀಲ, ಮಂಜುನಾಥ ಪಾಟೀಲ, ಸೌದಾಗರ ಕಾರ್ಯನಿರ್ವಹಿಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಕಡಕೋಳ ಕ್ರೀಡಾಪಟುಗಳಿಗೆ ಸಮವಸ್ತ್ರ ನೀಡಿದರೆ, ದೈಹಿಕ ಶಿಕ್ಷಣ ಶಿಕ್ಷಕರು ನೆಟ್ ವ್ಯವಸ್ಥೆ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳ್ನಾವರ</strong>: ಮಿಂಚಿನ ಪ್ರದರ್ಶನ ತೋರಿದ ಕುಮಟಾದ ಶಾಂತಿಕಾಂಬಾ ತಂಡವು ಇಲ್ಲಿ ಅಳ್ನಾವರ ವಾರಿಯರ್ಸ್ ಕ್ರೀಡಾ ಪ್ರೇಮಿಗಳು ಹಮ್ಮಿಕೊಂಡ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯಲ್ಲಿ ಅನಾಯಾಸವಾಗಿ ಪ್ರಶಸ್ತಿ ಗೆದ್ದಿತು.</p>.<p>ಗ್ರಾಮದೇವಿ ಜಾತ್ರಾ ಸ್ಥಳದಲ್ಲಿ ನಡೆದ ಈ ಟೂರ್ನಿಯನ್ನು ಮಾಜಿ ಸಚಿವ ಸಂತೋಷ್ ಲಾಡ್ ಪ್ರಾಯೋಜಿಸಿದ್ದರು. ಟೂರ್ನಿ ಫೈನಲ್ ಪಂದ್ಯದಲ್ಲಿ ಕುಮಟಾ ತಂಡವು ಎರಡು ನೇರ ಸೆಟ್ಗಳಿಂದ ಧಾರವಾಡದ ಸಾಯಿ ತಂಡವನ್ನು ಸುಲಭವಾಗಿ ಮಣಿಸಿತು. ಉತ್ತಮ ಆಟವಾಡಿದ ದಾಂಡೇಲಿ ತಂಡ ತೃತೀಯ ಸ್ಥಾನಗಳಿಸಿತು.</p>.<p>ಕುಮಟಾ ತಂಡದ ನವೀನ್ ಅವರಿಗೆ ಉತ್ತಮ ಹೊಡೆತಗಾರ, ಚಿನ್ನ ಅವರಿಗೆ ಉತ್ತಮ ಎಸೆತಗಾರ ಹಾಗೂ ಧಾರವಾಡದ ಸಾಯಿ ತಂಡದ ವಿಕಾಸ ಅವರಿಗೆ ‘ಬೆಸ್ಟ್ ಆಲ್ರೌಂಡರ್’ ಬಹುಮಾನ ನೀಡಲಾಯಿತು.</p>.<p>ಸುಂದರ ಸಂಜೆಯಲ್ಲಿ ಟೂರ್ನಿ ಉದ್ಘಾಟಿಸಿ ಮಾತನಾಡಿದ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ‘ಸಂತೋಷ್ ಲಾಡ್ ಅವರು ಕ್ರೀಡೆಗಳಿಗೆ ಸದಾ ಉತ್ತೇಜನ ನೀಡುತ್ತ ಬಂದಿದ್ದಾರೆ. ಕ್ರೀಡಾಪಟುಗಳನ್ನು ಬೆಳೆಸಬೇಕು, ಅವರನ್ನು ಪ್ರೋತ್ಸಾಹಿಸಬೇಕು ಎಂಬುದು ಅವರ ಹಂಬಲ’ ಎಂದರು.</p>.<p>‘ಪ್ರಸ್ತುತ ಒತ್ತಡದ ಜೀವನ ಶೈಲಿಯಿಂದ ಹೊರಬರಲು ಕ್ರೀಡೆಯಲ್ಲಿ ತೊಡಗಬೇಕು. ಈ ಮೂಲಕ ಆರೋಗ್ಯಯುತ ಸಮಾಜ ಕಟ್ಟಬೇಕು’ ಎಂದರು.</p>.<p>ಹಿರಿಯರಾದ ಹಸನಅಲಿ ಶೇಖ, ಶಾಂತಿಲಾಲ್ ಪಟೇಲ, ರಸೀದ್ ಬಾಗೇವಾಡಿ, ಬಸವರಾಜ ಕಡಕೋಳ, ರಾಯಪ್ಪ ಹುಡೇದ, ಸತ್ತಾರ ಬಾತಖಂಡಿ, ಜಾವೀದ್ ಕಿತ್ತೂರ, ಯುನೂಸ್ ಬಾಗವಾನ್, ರಮೇಶ ಕುನ್ನೂರಕರ, ಜೈಲಾನಿ ಸುದರ್ಜಿ, ಸುನಿಲ ರಾಠೋಡ್, ನಾಗರಾಜ ಹಾಲವರ, ನಿಸಾರ್ ಖತೀಬ್ ಇದ್ದರು.</p>.<p>ನಿರ್ಣಾಯಕರಾಗಿ ಪುಂಡಲಿಕ ಪಾರ್ದಿ, ಸುನಿಲ್ ಸಾಗರೇಕರ, ಮಹಾಂತೇಶ ಬೆಳಗಾವಿ, ಆನಂದ ಪಾಟೀಲ, ಮಂಜುನಾಥ ಪಾಟೀಲ, ಸೌದಾಗರ ಕಾರ್ಯನಿರ್ವಹಿಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಕಡಕೋಳ ಕ್ರೀಡಾಪಟುಗಳಿಗೆ ಸಮವಸ್ತ್ರ ನೀಡಿದರೆ, ದೈಹಿಕ ಶಿಕ್ಷಣ ಶಿಕ್ಷಕರು ನೆಟ್ ವ್ಯವಸ್ಥೆ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>