‘ಹು–ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಎಸ್ಎಸ್ಕೆ ಹಾಗೂ ಕ್ಷತ್ರೀಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 25 ವರ್ಷಗಳಿಂದ ನಮ್ಮ ಸಮಾಜದ ಯಾವೊಬ್ಬರೂ ಶಾಸಕರಾಗಿಲ್ಲ. ಲಾಠಿ ಏಟು ತಿಂದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿಕೊಳ್ಳಲು ನಾವು ಬೇಕು, ಅಧಿಕಾರ ಅನುಭವಿಸಲು ಬೇರೆಯವರು ಬೇಕು. ಇದ್ಯಾವ ನ್ಯಾಯ? ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ಒಡನಾಟದಲ್ಲಿದ್ದು, ಅವರ ಮಾರ್ಗದರ್ಶನದ ಮೇರೆಗೆ ಟಿಕೆಟ್ಗಾಗಿ ಮನವಿ ಸಲ್ಲಿಸಿದ್ದೇನೆ. ಈ ಕುರಿತು ಶಿಸ್ತು ಕ್ರಮ ಎಂದು ನೋಟಿಸ್ ನೀಡಿದರೆ, ಪಕ್ಷಕ್ಕೆ ದೊಡ್ಡ ಹೊಡೆತವಾಗಲಿದೆ’ ಎಂದು ಹೇಳಿದರು.