ಹುಬ್ಬಳ್ಳಿ: ಹುಲಿಯ ಬದಲಾಗಿ ಗೋವು ರಾಷ್ಟ್ರ ಪ್ರಾಣಿಯಾಗಲಿ ಎಂದು ಆರ್ಎಸ್ಎಸ್ ಹಿರಿಯ ಪ್ರಚಾರಕ ಸು ರಾಮಣ್ಣ ಹೇಳಿದರು. ಗೋ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗೋವು ಇತರರಿಗಾಗಿಯೇ ಜೀವನ ಸವೆಸುತ್ತದೆ. ಆದ್ದರಿಂದ ಅದನ್ನು ರಾಷ್ಟ್ರ ಪ್ರಾಣಿಯಾಗಿಸಬೇಕು ಎಂದರು.
ಗೋ ಹತ್ಯೆ ಬಂದ್ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗ ಅದನ್ನು ಪೂರ್ಣಗೊಳಿಸಿದ್ದೇವೆ. ಕಾನೂನಿಗೆ ಅವರೇ ಪ್ರೇರಣೆ ಎಂದು ಹೇಳಿದರು.
ಬೇರೆಯವರ ಕುಮ್ಮಕ್ಕಿನಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ರಾಜಸ್ಥಾನದಲ್ಲಿ ಬಿಜೆಪಿ ಯನ್ನು ರೈತರು ಬೆಂಬಲಿಸಿದ್ದಾರೆ ಎಂಬುದನ್ನು ಗಮನಿಸಬೇಕು ಎಂದರು