ಹುಬ್ಬಳ್ಳಿ: ವ್ಯಕ್ತಿಯೊಬ್ಬರು ಪತ್ನಿ ಎದುರಿಗೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ಸಂತೋಷ ನಗರದ ಕೆರೆಯಲ್ಲಿ ಶುಕ್ರವಾರಘಟನೆ ನಡೆದಿದೆ.
ರೋಹಿತ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಣ್ಣ ಹೋಟೆಲ್ ನಡೆಸುತ್ತಿದ್ದ ಅವರು, ಪತ್ನಿಯೊಂದಿಗೆ ಕೆರೆಯತ್ತ ಬಂದಿದ್ದರು. ಪತ್ನಿಯೊಂದಿಗೆ ಮಾತನಾಡುತ್ತಿದ್ದಾಗಲೇ ರೋಹಿತ್ ಕೆರೆಗೆ ಹಾರಿದ್ದಾರೆ.
ಕೂಡಲೇ ಪತ್ನಿ ನೆರವಿಗಾಗಿ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದವರು ಸ್ಥಳಕ್ಕೆ ಬರುವಷ್ಟರಲ್ಲಿ ರೋಹಿತ್ ಅವರು ನೀರಿನಲ್ಲಿ ಮುಳುಗಿದ್ದರು. ಮೃತದೇಹವನ್ನು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಶೋಕ ನಗರ ಪೊಲೀಸರು ತಿಳಿಸಿದ್ದಾರೆ.