ಈಗಾಗಲೇ ಜಿಲ್ಲಾಡಳಿತ ತಾತ್ಕಾಲಿಕ ಪರಿಹಾರವಾಗಿ ಮೃತ ಕುಟುಂಬಗಳಿಗೆ ತಲಾ ₹2ಲಕ್ಷ ಪರಿಹಾರ ನೀಡಿತ್ತು. ದುರಂತದಲ್ಲಿ ಒಟ್ಟು 59 ಜನ ಗಾಯಗೊಂಡಿದ್ದರು. ಇವರಲ್ಲಿ ಶಸ್ತ್ರಚಿಕಿತ್ಸೆ, ಮೂಳೆಮುರಿತದೊಂದಿಗೆ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಈ ಮೊದಲು ಪರಹಾರ ಘೋಷಿಸಿರಲಿಲ್ಲ. ಈಗ ಪಾಲಿಕೆವತಿಯಿಂದ ಅವರಿಗೂ ಪರಿಹಾರ ಸಿಗುತ್ತಿರುವುದು ಆ ಕುಟುಂಬಗಳಿಗೆ ನೆಮ್ಮದಿ ತಂದಿದೆ.