ಸಮಾನಾಂತರ ವೇದಿಕೆ–2ರಲ್ಲಿ ಭಾನುವಾರ ನಡೆದ ‘ಕಾವ್ಯಪ್ರಚಾರದ ವಿಭಿನ್ನ ನೆಲೆಗಳು’ ಗೋಷ್ಠಿಯಲ್ಲಿ ‘ಸುಗಮ ಸಂಗೀತ’ ವಿಷಯ ಕುರಿತು ಮಾತನಾಡಿದ ಅವರು, ‘ನಾನು 40 ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದೇನೆ. ಪರಿಷತ್ನ ಯಾವ ಅಧ್ಯಕ್ಷರೂ, ಸಮ್ಮೇಳನಾಧ್ಯಕ್ಷರ ಜತೆಗೆ ತಮ್ಮ ಭಾವಚಿತ್ರವನ್ನು ಹಾಕಿಕೊಂಡಿದ್ದನ್ನು ನೋಡಿರಲಿಲ್ಲ. ಅಲ್ಲಿ ಅಧ್ಯಕ್ಷರ ಭಾವಚಿತ್ರ ಇರಬೇಕೇ ವಿನಾ ಇತರರದಲ್ಲ' ಎಂದು ನುಡಿದರು.