ಹುಬ್ಬಳ್ಳಿ: ನಗರದ ದೇವಾಂಗಪೇಟೆ ಮುಖ್ಯರಸ್ತೆಯ ರಾಜಾಜಿನಗರ ಕ್ರಾಸ್ ಬಳಿ ನಡೆದಿದ್ದ ಬುಧವಾರ ರಾತ್ರಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಶೋಕನಗರ ಠಾಣೆ ಪೊಲೀಸರು ಗುರುವಾರ ಆಸಿಫ್ ತಹಶೀಲ್ದಾರ್ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ದೇವಾಂಗಪೇಟೆಯ ಮೆಹಬೂಬಸಾಬ್ ಅಲ್ಲಾಭಕ್ಷ ಶಿವಳ್ಳಿ (40) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಶವವನ್ನು ಚರಂಡಿಗೆ ಎಸೆದು ಹೋಗಿದ್ದ. ಕೊಲೆಯಾದ ಮೆಹಬೂಬಸಾಬ್ ಮತ್ತು ಆಸಿಫ್ ಇಬ್ಬರೂ ಸಂಬಂಧಿಗಳಾಗಿದ್ದು, ಕೌಟುಂಬಿಕ ಕಲಹವೇ ಕೊಲೆಗೆ ಕಾರಣವಾಗಿದೆ ಎಂದು ಅಶೋಕನಗರ ಠಾಣೆ ಪೊಲೀಸರು ತಿಳಿಸಿದರು.