‘ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ ವೇಳೆ ಏನಾದರೂ ಸಮಸ್ಯೆಯಾದರೆ ಅಂಜುಮನ್ ಸಮಿತಿಗೆ ತಿಳಿಸಬೇಕು. ಅವರು ಪೊಲೀಸರಿಗೆ ತಿಳಿಸಿ, ಸಮಸ್ಯೆ ಬಗೆಹರಿಸಲು ಯತ್ನಿಸುತ್ತಾರೆ. ಅದರ ಹೊರತಾಗಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಗಲಭೆ ನಡೆದ ವೇಳೆ ಸೇರಿದಂತೆ ಹೆಚ್ಚು ಜನ ಸೇರಬಾರದು. ಅಂಜುಮನ್ ಸಂಸ್ಥೆಯವರು ಯುವಕರನ್ನು ನಿಯಂತ್ರಿಸಬೇಕು. ಸಂಚಾರ ದಟ್ಟಣೆ ಉಂಟಾಗದಂತೆ ವಾಹನಗಳನ್ನು ದೂರದಲ್ಲಿ ನಿಲ್ಲಿಸಿ, ಪ್ರಾರ್ಥನೆಗೆ ಬರಬೇಕು’ ಎಂದು ಪೊಲೀಸ್ ಆಯುಕ್ತ ಲಾಭೂರಾಮ್ ಸೂಚಿಸಿದರು.