ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಚುಕ್ಕೆ ಇಲ್ಲದ ಆಡಳಿತ; ಮೋದಿ ಹೆಗ್ಗಳಿಕೆ: ಶಾಸಕ ಮಹೇಶ ಟೆಂಗಿನಕಾಯಿ

Published 29 ಏಪ್ರಿಲ್ 2024, 16:20 IST
Last Updated 29 ಏಪ್ರಿಲ್ 2024, 16:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಪಾರದರ್ಶಕ ಆಡಳಿತ ನಡೆಸಿದ ಖ್ಯಾತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 45ರ ವ್ಯಾಪ್ತಿಯ ನಾಗಶೆಟ್ಟಿಕೊಪ್ಪದ ದೊಡ್ಡ ಓಣಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ವಿಶ್ವದಲ್ಲಿ ಭಾರತವು ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ರಾಮಮಂದಿರ ನಿರ್ಮಿಸುವ ಮೂಲಕ 500 ವರ್ಷಗಳ ದೇಶದ ಜನರ ಆಸೆಯನ್ನು ಅವರು ಈಡೇರಿಸಿದ್ದಾರೆ’ ಎಂದರು.

‘ಚಂದ್ರಯಾನ ಯಶಸ್ಸಿನ ಮೂಲಕ ಹೊಸ ಇತಿಹಾಸ ಬರೆಯಲಾಗಿದೆ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಮೇನಕಾ ಹುರಳಿ, ಪ್ರವೀಣ ಹುರಳಿ, ವಿನೋಧ ರೇವಣಕರ, ಮಣಿಕಂಠ ಶ್ಯಾಗೋಟಿ, ಶಿವಪುತ್ರಪ್ಪ ಸಂಬರಗಿ, ಮಹದೇವಪ್ಪ ಮೆಣಸಿನಕಾಯಿ, ದ್ಯಾಮಣ್ಣ ಗುರಣ್ಣವರ, ಚಂದ್ರು ನೂಲ್ವಿ, ಅಶೋಕ ಬಿಳಗಿ, ಶಂಕ್ರಪ್ಪ ಶಿರೂರ,  ಯಲ್ಲಪ್ಪ ಮಾನೆ, ಮಾರುತಿ ಬಿಳಗಿ, ಶೇಖರಗೌಡ ಸೋಮನಗೌಡ್ರ, ಶ್ರೀಕಾಂತ ಪೂಜಾರಿ, ಮಂಜುನಾಥ ಹಳ್ಯಾಳ, ಪವನ ಹಳ್ಳಾಳ, ಶಿವಾನಂದ ಜಮ್ಮಿಹಾಳ, ಶ್ರೀಧರ ತಟ್ಟಿಮನಿ, ರಹೀಮ್ ಬೇಪಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT