‘ಆರಂಭದ ಒಂದು ತಿಂಗಳು ಮಾತ್ರ ಈ ವ್ಯವಸ್ಥೆ ಉತ್ತಮವಾಗಿ ನಡೆದಿತ್ತು. ನಂತರ ಆಟೊ ಚಾಲಕರು ಅಸಮಾಧಾನ ವ್ಯಕ್ತಪಡಿಸಲು ಮುಂದಾದರು. ನಿಯಮಾವಳಿ ಪ್ರಕಾರ ನಾವು ಒಂದು ಆಟೊದಲ್ಲಿ ಮೂವರಿಗೆ ಮಾತ್ರ ಅವಕಾಶ ನೀಡುತ್ತಿದ್ದೆವು. ಆದರೆ, ಅವರು ಐದಾರು ಮಂದಿಯನ್ನು ಬಾಡಿಗೆಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೆ, ಆಟೊ ಚಾಲಕರು ನೇರವಾಗಿ ಪ್ಲಾಟ್ಫಾರ್ಮ್ಗೆ ಹೋಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಇದನ್ನು ತಪ್ಪಿಸಲು ಒಬ್ಬ ಆರ್ಪಿಎಫ್ ಸಿಬ್ಬಂದಿಯನ್ನು ಕಾಯಂ ಆಗಿ ನೇಮಿಸಬೇಕು ಎಂದು ರೈಲ್ವೆ ಇಲಾಖೆಗೆ ವಿನಂತಿಸಲಾಗಿತ್ತು. ಸಿಬ್ಬಂದಿ ಕೊರತೆ ಎಂದು ಕೈಚೆಲ್ಲಿದರು’ ಎಂದು ಪ್ರೀ–ಪೇಡ್ ಆಟೊ ಸರ್ವಿಸ್ ಸಂಸ್ಥೆ ಅಧ್ಯಕ್ಷ ಬಿ. ಚಂದ್ರಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.