ಹುಬ್ಬಳ್ಳಿ: ಕೋವಿಡ್ ಹರಡುವಿಕೆ ತಡೆಯುವ ಸಲುವಾಗಿ ಮುಂಜಾಗೃತಾ ಕ್ರಮವಾಗಿ ಜ.14 ರಿಂದ 16ರವರೆಗೆ ನೀರಸಾಗರ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಜಾತ್ರೆ ಹಾಗೂ ಜನಸಂದಣಿ ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
ಪ್ರವಚನ ಮಂದೂಡಿಕೆ ಹುಬ್ಬಳ್ಳಿ: ಭವಾನಿನಗರದ ನಂಜನಗೂಡು ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಜ.13 ರಂದು ನಡೆಯಬೇಕಿದ್ದ ಅಖಂಡ ಭಾಗವತ ಪ್ರವಚನವನ್ನು ಮುಂದೂಡಲಾಗಿದೆ ಮಠದ ಪ್ರಕಟಣೆ ತಿಳಿಸಿದೆ.