ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಉಲ್ಲೇಖಿಸದೆ ‘ಇವರಿಬ್ಬರೂ ರಾಜಕೀಯದಲ್ಲಿ ದೊಡ್ಡ ಸ್ಥಾನ ಅಲಂಕರಿಸಿದ್ದು, ಈಗ ಇವರ ಹೆಸರುಗಳನ್ನು ಐಎಂಎ ನಿರ್ದೇಶಕ ತನಿಖೆ ವೇಳೆ ಹೇಳಿರುವುದಾಗಿತಿಳಿದು ಬಂದಿದೆ. ಈ ತನಿಖೆ ತಾರ್ಕಿಕ ಅಂತ್ಯಕ್ಕೆ ಬರಬೇಕು ಹಾಗೂ ಬಡ ಜನರಿಗೆ ನ್ಯಾಯ ಸಿಗಬೇಕು. ಇಬ್ಬರು ರಾಜಕಾರಣಿಗಳು ಕರ್ನಾಟಕದ ಜನತೆಗೆ ಐಎಂಎ ನಿರ್ದೇಶಕನ ಹೇಳಿಕೆಗೆ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.