<p><strong>ಧಾರವಾಡ:</strong> ‘ಶುದ್ಧ ಭಾಷೆ ಬಳಕೆ, ವೈವಿಧ್ಯಮಯ ಕಾರ್ಯಕ್ರಮಗಳೇ ಧಾರವಾಡ ಆಕಾಶವಾಣಿಯ ವೈಶಿಷ್ಟ್ಯ’ ಎಂದು ಕವಿ ಸತೀಶ್ ಕುಲಕರ್ಣಿ ಹೇಳಿದರು.</p>.<p>ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಬುಧವಾರ ನಡೆದ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಆಕಾಶವಾಣಿ ಎಂದರೆ ಮೌನ ಮತ್ತು ಧ್ಯಾನ ಕೇಂದ್ರ. ಅದರಲ್ಲಿ ಕನ್ನಡ ಬಳಕೆ ವಿಶಿಷ್ಟವಾಗಿರುತ್ತದೆ. ಧ್ವನಿಯಿಂದಲೇ ವ್ಯಕ್ತಿತ್ವ ಗುರುತಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<p>ಹಿರಿಯ ಕಲಾವಿದ ಪಂಡಿತ ಎಂ.ವೆಂಕಟೇಶಕುಮಾರ ಮಾತನಾಡಿ, ‘ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಮಹತ್ವ ನೀಡಿದ ದೇಶ ನಾಲ್ಕು ಆಕಾಶವಾಣಿ ಕೇಂದ್ರಗಳಲ್ಲಿ ಧಾರವಾಡ ಆಕಾಶವಾಣಿಯೂ ಒಂದು. ಈ ಕೇಂದ್ರದಲ್ಲಿ ಪ್ರಸಾರವಾಗುವ ಹಿರಿಯ ಸಂಗೀತ ಕಲಾವಿದರ ಕಾರ್ಯಕ್ರಮಗಳನ್ನು ಕೇಳಿ ಎಷ್ಟೋ ಸಂಗೀತಗಾರರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಸುಧಾರಣೆಯಾಗಿದ್ದಾರೆ’ ಎಂದರು.</p>.<p>ಧಾರವಾಡ ಆಕಾಶವಾಣಿ ಮುಖ್ಯಸ್ಥ ಕೆ.ಅರುಣ್ ಪ್ರಭಾಕರ್, ಕಾರ್ಯಕ್ರಮ ಮುಖ್ಯಸ್ಥ ಶರಣ ಬಸವ ಚೋಳಿನ್, ಮಂಜುಳಾ ಪುರಾಣಿಕ್, ಮಾಯಾ ರಾಮನ್ ಇದ್ದರು. </p>.<p><strong>‘ಸ್ಟುಡಿಯೊ ಅಭಿವೃದ್ಧಿ ಆಗಲಿ’</strong></p><p>‘ಧಾರವಾಡ ಆಕಾಶವಾಣಿಗೆ ತನ್ನದೇ ಆದ ವರ್ಚಸ್ಸಿದೆ. ಅನೇಕರ ಬೆಳವಣಿಗೆಗೆ ಈ ಕೇಂದ್ರ ಪೂರಕವಾಗಿದೆ. ಸಂಗೀತ ಶಿಕ್ಷಣ ಸೇರಿದಮತೆ ವಿವಿಧ ಕ್ಷೇತ್ರಗಳ ಮಹಾನ್ ಸಾಧಕರು ಈ ಕೇಂದ್ರದ ಸಂಪರ್ಕದಲ್ಲಿದ್ದರು’ ಎಂದು ಮಕ್ಕಳ ವೈದ್ಯ ರಾಜನ್ ದೇಶಪಾಂಡೆ ಹೇಳಿದರು. ‘ಕೇಂದ್ರದ ಸ್ಟುಡಿಯೋಗಳನ್ನು ಅಭಿವೃದ್ಧಿ ಮಾಡಬೇಕು. ಸಾರ್ವಜನಿಕರ ಕೊಠಡಿಯನ್ನು ನವೀಕರಣಗೊಳಿಸಬೇಕು. ಹೊಸ ಸಂಗೀತ ಪರಿಕರಗಳನ್ನು ತರಬೇಕು. ಗ್ರಂಥಾಲಯವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಬೇಕು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ಶುದ್ಧ ಭಾಷೆ ಬಳಕೆ, ವೈವಿಧ್ಯಮಯ ಕಾರ್ಯಕ್ರಮಗಳೇ ಧಾರವಾಡ ಆಕಾಶವಾಣಿಯ ವೈಶಿಷ್ಟ್ಯ’ ಎಂದು ಕವಿ ಸತೀಶ್ ಕುಲಕರ್ಣಿ ಹೇಳಿದರು.</p>.<p>ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಬುಧವಾರ ನಡೆದ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಆಕಾಶವಾಣಿ ಎಂದರೆ ಮೌನ ಮತ್ತು ಧ್ಯಾನ ಕೇಂದ್ರ. ಅದರಲ್ಲಿ ಕನ್ನಡ ಬಳಕೆ ವಿಶಿಷ್ಟವಾಗಿರುತ್ತದೆ. ಧ್ವನಿಯಿಂದಲೇ ವ್ಯಕ್ತಿತ್ವ ಗುರುತಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<p>ಹಿರಿಯ ಕಲಾವಿದ ಪಂಡಿತ ಎಂ.ವೆಂಕಟೇಶಕುಮಾರ ಮಾತನಾಡಿ, ‘ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಮಹತ್ವ ನೀಡಿದ ದೇಶ ನಾಲ್ಕು ಆಕಾಶವಾಣಿ ಕೇಂದ್ರಗಳಲ್ಲಿ ಧಾರವಾಡ ಆಕಾಶವಾಣಿಯೂ ಒಂದು. ಈ ಕೇಂದ್ರದಲ್ಲಿ ಪ್ರಸಾರವಾಗುವ ಹಿರಿಯ ಸಂಗೀತ ಕಲಾವಿದರ ಕಾರ್ಯಕ್ರಮಗಳನ್ನು ಕೇಳಿ ಎಷ್ಟೋ ಸಂಗೀತಗಾರರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಸುಧಾರಣೆಯಾಗಿದ್ದಾರೆ’ ಎಂದರು.</p>.<p>ಧಾರವಾಡ ಆಕಾಶವಾಣಿ ಮುಖ್ಯಸ್ಥ ಕೆ.ಅರುಣ್ ಪ್ರಭಾಕರ್, ಕಾರ್ಯಕ್ರಮ ಮುಖ್ಯಸ್ಥ ಶರಣ ಬಸವ ಚೋಳಿನ್, ಮಂಜುಳಾ ಪುರಾಣಿಕ್, ಮಾಯಾ ರಾಮನ್ ಇದ್ದರು. </p>.<p><strong>‘ಸ್ಟುಡಿಯೊ ಅಭಿವೃದ್ಧಿ ಆಗಲಿ’</strong></p><p>‘ಧಾರವಾಡ ಆಕಾಶವಾಣಿಗೆ ತನ್ನದೇ ಆದ ವರ್ಚಸ್ಸಿದೆ. ಅನೇಕರ ಬೆಳವಣಿಗೆಗೆ ಈ ಕೇಂದ್ರ ಪೂರಕವಾಗಿದೆ. ಸಂಗೀತ ಶಿಕ್ಷಣ ಸೇರಿದಮತೆ ವಿವಿಧ ಕ್ಷೇತ್ರಗಳ ಮಹಾನ್ ಸಾಧಕರು ಈ ಕೇಂದ್ರದ ಸಂಪರ್ಕದಲ್ಲಿದ್ದರು’ ಎಂದು ಮಕ್ಕಳ ವೈದ್ಯ ರಾಜನ್ ದೇಶಪಾಂಡೆ ಹೇಳಿದರು. ‘ಕೇಂದ್ರದ ಸ್ಟುಡಿಯೋಗಳನ್ನು ಅಭಿವೃದ್ಧಿ ಮಾಡಬೇಕು. ಸಾರ್ವಜನಿಕರ ಕೊಠಡಿಯನ್ನು ನವೀಕರಣಗೊಳಿಸಬೇಕು. ಹೊಸ ಸಂಗೀತ ಪರಿಕರಗಳನ್ನು ತರಬೇಕು. ಗ್ರಂಥಾಲಯವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಬೇಕು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>