‘ಕುರಿಗಳ ಕಳವು ಹೆಚ್ಚುತ್ತಿದ್ದು, ಪಶು ಹಾಗೂ ಕುರಿ ಪಾಲಕರ ಬದುಕುವ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯವರಿಂದಲೂ ಶೋಷಣೆ ನಡೆಯುತ್ತಿದ್ದು, ಲಂಚ ಕೇಳಿದ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗಳು ನಡೆದಿವೆ. ಹಲವಾರು ಕುಟುಂಬಗಳು ಇದೇ ಕೆಲಸ ನಂಬಿ, ಜೀವನ ಸಾಗಿಸುತ್ತಿರುವುದರಿಂದ ಸರ್ಕಾರ ಇವರ ನೆರವಿಗೆ ಧಾವಿಸಬೇಕು. ಕಾಯ್ದೆ ಮೂಲಕ ಅವರ ಸಂರಕ್ಷಣೆ ಮಾಡಬೇಕು. ಕಾಡುಪ್ರಾಣಿಗಳು ಇಲ್ಲದ ಕಡೆ ಪಶು, ಕುರಿ ಮೇಯಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.